ಹಂಪಿ ಉತ್ಸವ: ಮುಖ್ಯ ವೇದಿಕೆಗೆ ಎಂಪಿ ಪ್ರಕಾಶರ ಹೆಸರಿಡಲು ಹಾಗೂ ಹಂಪಿಯ ಬಗ್ಗೆ ಹಾಡು ಬಿಡುಗಡೆಗೆ ಒತ್ತಾಯ
Hampi Festival: Demand to name the main stage after MP Prakashar and release a song about Hampi
ಲೋಕದರ್ಶನ ವರದಿ
ಹಂಪಿ ಉತ್ಸವ: ಮುಖ್ಯ ವೇದಿಕೆಗೆ ಎಂಪಿ ಪ್ರಕಾಶರ ಹೆಸರಿಡಲು ಹಾಗೂ ಹಂಪಿಯ ಬಗ್ಗೆ ಹಾಡು ಬಿಡುಗಡೆಗೆ ಒತ್ತಾಯ
ಹೊಸಪೇಟೆ 05: ಹಂಪಿ ಉತ್ಸವದ ರುವಾರಿ, ಕನ್ನಡಕ್ಕೊಂದು ಕನ್ನಡ ವಿಶ್ವವಿದ್ಯಾಲಯ ಕೊಟ್ಟ ಎಂ.ಪಿ ಪ್ರಕಾಶರನ್ನು ಸ್ಮರಿಸಿಕೊಳ್ಳುವುದು ಕನ್ನಡಿಗರ ಅದರಲ್ಲೂ ವಿಶೇಷವಾಗಿ ಬಳ್ಳಾರಿ-ವಿಜಯನಗರ ಜಿಲ್ಲೆಯ ನಾಗರೀಕರ ಜವಾಬ್ದಾರಿ ಹಾಗೂ ಆಧ್ಯ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಹಂಪಿ ಉತ್ಸವ-2026ರ ಮುಖ್ಯ ವೇದಿಕೆಗೆ ಎಂಪಿ ಪ್ರಕಾಶರ ಹೆಸರನ್ನಿಡಬೇಕು ಮತ್ತು ಹಂಪಿಯ ಬಗ್ಗೆ ಹಾಗೂ ಎಂ.ಪಿ.ಪ್ರಕಾಶರ ಬಗ್ಗೆ ಕವಿ ಜಂಬುನಾಥ ಹೆಚ್.ಎಂ. ರಚನೆಯ ಚಿತ್ರಮುದ್ರಿತ ಹಾಡನ್ನು ಫೆಬ್ರವರಿ 13ರಂದು ಹಂಪಿ ಉತ್ಸವ ಉದ್ಘಾಟನಾ ಸಂದರ್ಭದಲ್ಲಿ ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿ ವಿಜಯನಗರ ಸಾಹಿತ್ಯ ಪರಿಷತ್ತು, ಜಿಲ್ಲಾ ಘಟಕದಿಂದ ಮನವಿ ಸಲ್ಲಿಸಲಾಯಿತು.
ಪರಿಷತ್ತಿನ ಜಿಲ್ಲಾಧ್ಯಕ್ಷ ಮಧುರಚನ್ನ ಶಾಸ್ತ್ರಿ, ಕನ್ನಡಪರ ಹೋರಾಟಗಾರ ಕಾಶಿನಾಥಯ್ಯ ಎಸ್.ಎಂ., ಓಂಕಾರ, ರವಿಕಾಂತ, ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತ ವಿಶ್ವನಾಥ ಕವಿತಾಳ, ಅಮರೇಶ್ವರ ಎಸ್.ಪಿ, ವೃಷಬೇಂದ್ರಯ್ಯ, ರೇವಣಸಿದ್ದಯ್ಯ, ವಿಜಯೇಂದ್ರ ಅಗ್ನಿಹೋತ್ರಿ, ರಾಜಶೇಖರ ಸೂಳೆಬಾವಿ, ರಾಜಶೇಖರ್ಪ, ಮಾರೆಣ್ಣ, ಲಿಂಗಪ್ಪ, ಕುರುಬರ ನಾಗರಾಜ, ಶಶಿಧರಯ್ಯ, ಶ್ರವಣ, ಹುಲುಗಪ್ಪ, ಕಿರಣ್ಕುಮಾರ್, ಕರಾಮತ್ ಖವಾಸ್, ಶ್ರೀನಿವಾಸ ಶೆಟ್ಟಿ, ಪ್ರಹ್ಲಾದ್ರಾವ್, ಕವಿ ಜಂಬುನಾಥ ಹೆಚ್.ಎಂ. ಮತ್ತಿತರರು ಜಿಲ್ಲಾಧಿಕಾರಿಗಳ ಅನುಪಸ್ಥಿತಿಯಲ್ಲಿ ತಹಶೀಲ್ದಾರರಾದ ಕಾರ್ತೀಕರವರಿಗೆ ಮನವಿ ಸಲ್ಲಿಸಿ, ಒತ್ತಾಯಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 