ಹೆಚ್‌.ಎಸ್‌. ಜೈಕುಮಾರ್ ಆಯ್ಕೆ: ಸನ್ಮಾನ

ಹೆಚ್‌.ಎಸ್‌. ಜೈಕುಮಾರ್ ಆಯ್ಕೆ: ಸನ್ಮಾನ H.S. Jaikumar Selection: Felicitation

ವಿಜಯಪುರ 23: ಇತ್ತೀಚೆಗೆ ನವದೆಹಲಿಯ ಸುಕೋಮಲ್ ಸೇನ್ ಭವನದಲ್ಲಿ ಹಮ್ಮಿಕೊಂಡ ಅಖಿಲ ಭಾರತ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ರಾಷ್ಟ್ರೀಯ ಕಾರ್ಯಕಾರಿ ಸಭೆಯಲ್ಲಿ ಒಕ್ಕೂಟದ " ರಾಷ್ಟ್ರೀಯ ಉಪಾಧ್ಯಕ್ಷ" (ಖಿಗಋಅಂತರಾಷ್ಟ್ರೀಯ ವಿಭಾಗ)ರಾಗಿ ಒಕ್ಕೂಟದ ರಾಜ್ಯಾಧ್ಯಕ್ಷರನ್ನಾಗಿ ಹೆಚ್‌.ಎಸ್‌. ಜೈಕುಮಾರ್ ಅವರನ್ನು ಆಯ್ಕೆ ಮಾಡಿದ ಹಿನ್ನೆಲೆ ವಿಜಯಪುರ ಜಿಲ್ಲೆಯ ನಗರದ ಅಥಣಿ ರಸ್ತೆಯಲ್ಲಿರುವ ಜಮಖಾನ್ ಕ್ಲಬ್‌ನಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಪಿಂಚಣಿದಾರರ ಒಕ್ಕೂಟ ಜಿಲ್ಲಾ ಸಮಿತಿ ವಿಜಯಪುರ ವತಿಯಿಂದ ಹಮ್ಮಿಕೊಂಡ ಜಿಲ್ಲಾ ಸಂಘಟನಾ ಸಭೆಯಲ್ಲಿ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು. 

ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕರಾದ ಸುರೇಶ ಜೀಬಿ, ಅಶೋಕ ಇಲಕಲ್, ದಾಕ್ಷಾಯಣಿ ಹುಡೇದ, ಹೇಮಲತಾ ವಸ್ತ್ರದ, ಎನ್‌. ಎಂ. ಹರನಾಳ, ಶಿಕ್ಷಣ ಇಲಾಖೆಯ ಮನಗೊಂಡ, , ಕಾರ್ಯಾಧ್ಯಕ್ಷರಾದ ಚಂದ್ರಶೇಖರ ಲೇಂಡಿ, ಆರ್‌.ಎಸ್‌. ಮಿಣಸಗಿ, ಅರ್ಜುನ ಕವಟೇಗರ, ಜಿ.ಬಿ. ಅಂಗಡಿ, ಬೆಳ್ಳುಂಡಗಿ, ನಿವೃತ್ತ ಎಐಡಬ್ಲ್ಯೂ ಎಂ.ಎಂ.ಪಾಟೀಲ, ಜೆ.ವಿ.ಕಿರಸೂರ, ಗುರುಸಿದ್ದ ಮೂರ್ತಿ ಇದ್ದರು.