ಗುರು ಮಹಾಲಿಂಗೇಶ್ವರ ಕಾಲೇಜು ವಿದ್ಯಾರ್ಥಿ ಅಗ್ನಿವೀರನಾಗಿ ಆಯ್ಕೆ: ಸನ್ಮಾನ

ಗುರು ಮಹಾಲಿಂಗೇಶ್ವರ ಕಾಲೇಜು ವಿದ್ಯಾರ್ಥಿ ಅಗ್ನಿವೀರನಾಗಿ ಆಯ್ಕೆ: ಸನ್ಮಾನ  Guru Mahalingeshwara College student selected as Agniveer: Honored

ರನ್ನ ಬೆಳಗಲಿ 17: ಗುರು ಮಹಾಲಿಂಗೇಶ್ವರ ಕಾಲೇಜಿನ ಹೆಮ್ಮೆಯ 16 ವಿದ್ಯಾರ್ಥಿಗಳು ಭಾರತೀಯ ಸಶಸ್ತ್ರ ಪಡೆಯ ‘ಅಗ್ನಿಪಥ್‌’ ಯೋಜನೆಯಡಿ ಅಗ್ನಿವೀರನಾಗಿ ಆಯ್ಕೆಯಾಗುವ ಮೂಲಕ ಕಾಲೇಜು ಹಾಗೂ ಈ ಭಾಗಕ್ಕೆ ಕೀರ್ತಿ ತಂದಿದ್ದಾರೆ. ಈ ಅಪೂರ್ವ ಸಾಧನೆಯನ್ನು ಮುಕ್ತಕಂಠದಿಂದ ಶ್ಲಾಘಿಸಲು ಕಾಲೇಜು ಆಡಳಿತ ಮಂಡಳಿ, ಸಿಬ್ಬಂದಿ ವರ್ಗ ಹಾಗೂ ಹಳೆಯ ವಿದ್ಯಾರ್ಥಿ ಸಂಘದ ಜಂಟಿ ಆಶ್ರಯದಲ್ಲಿ ವಿದ್ಯಾರ್ಥಿಗೆ ಸನ್ಮಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.  

ಕಾಲೇಜಿನ ಸಭಾಂಗಣದಲ್ಲಿ ನಡೆದ ಈ ಸಮಾರಂಭದಲ್ಲಿ ಸಾಧಕ ವಿದ್ಯಾರ್ಥಿಗಳನ್ನು ಮತ್ತು  ಶಾಲು ಹೊದಿಸಿ, ಸ್ಮರಣಿಕೆ ಹಾಗೂ ಫಲಪುಷ್ಪಗಳನ್ನು ನೀಡಿ ಅತ್ಯಂತ ಅದ್ಧೂರಿಯಾಗಿ ಸನ್ಮಾನಿಸಲಾಯಿತು.  ಹೆಮ್ಮೆಯ ಕ್ಷಣ - ಗಣ್ಯರ ನುಡಿ: ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕಾಲೇಜಿನ ಪ್ರಾಂಶುಪಾಲ ಆದ ಪಿ ಹೆಚ್ ನಾಯಕ ಮಾತನಾಡಿ,  

ನಮ್ಮ ಕಾಲೇಜಿನ ವಿದ್ಯಾರ್ಥಿಯೊಬ್ಬರು ಕಠಿಣ ದೈಹಿಕ ಹಾಗೂ ಲಿಖಿತ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿ ದೇಶ ಕಾಯುವ ಅಗ್ನಿವೀರನಾಗಿ ಆಯ್ಕೆಯಾಗಿರುವುದು ಇಡೀ ಸಂಸ್ಥೆಗೆ ಅತ್ಯಂತ ಹೆಮ್ಮೆಯ ವಿಷಯವಾಗಿದೆ. ಇವರ ಶಿಸ್ತು ಮತ್ತು ದೇಶಪ್ರೇಮ ಇತರ ವಿದ್ಯಾರ್ಥಿಗಳಿಗೆ ಮಾದರಿಯಾಗಲಿ ಎಂದು ಶುಭ ಹಾರೈಸಿದರು.