ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರನ್ನಾಗಿ ಗುಂಡಿ ಮಾರುತಿ ಆಯ್ಕೆ

ಬಳ್ಳಾರಿ, 19 : ಕನ್ನಡ ಸಾಹಿತ್ಯ ಪರಿಷತ್ತು, ಹೊಸಪೇಟೆ ತಾಲೂಕು ಘಟಕದ ಅಧ್ಯಕ್ಷರಾಗಿ ಸೇವೆಸಲ್ಲಿಸುತ್ತಿದ್ದ ಡಾ.ನಾಯಕರ ಹುಲುಗಪ್ಪ ಅವರು ರಾಜೀನಾಮೆ ನಿಡಿದ್ದಾರೆ.  

ಅವರ ರಾಜಿನಾಮೆಯನ್ನು ಅಂಗೀಕರಿಸಿ, ತೆರವಾಗಿರುವ ಕನ್ನಡ ಸಾಹಿತ್ಯ ಪರಿಷತ್ತು ಹೊಸಪೇಟೆ ತಾಲೂಕು ಘಟಕದ ಅಧ್ಯಕ್ಷ ಸ್ಥಾನಕ್ಕೆ ಗುಂಡಿ ಮಾರುತಿ ಇವರನ್ನು ಇಂದಿನಿಂದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು.  

ಅಧ್ಯಕ್ಷಸ್ಥಾನವನು ವಹಿಸಿಕೊಂಡು ಹೊಸಪೇಟೆ ತಾಲೂಕಿನಲ್ಲಿ ಪರಿಷತ್ತಿನ ಕಾರ್ಯಚಟುವಟಿಕೆಗಳನ್ನು ವ್ಯಾಪಕವಾಗಿ ಕೈಗೊಂಡು ತಾಲೂಕಿನಲ್ಲಿ ಕನ್ನಡ ಪರ ವಾತಾವರಣ ನಿರ್ಮಾಣ ಮಾಡುವಲ್ಲಿ ಪ್ರಮಾಣಿಕ ಸೇವೆ ಸಲ್ಲಿಸಬೇಕು ಎಂದು ಶುಭಹಾರೈಸಲಾಯಿತು.