ಗ್ರಾಮೀಣ ಕೃಷಿ ಪತ್ತಿನ ಸಂಘವು ಪ್ರಗತಿಪಥದತ್ತ: ಸಿದ್ಧನಾಥ ಅವಳೇಕರ

ಸಂಬರಗಿ 01: ಶಾಸಕ ರಾಜು ಕಾಗೆ ಶಾಸಕ ಲಕ್ಷ್ಮಣ ಸವದಿ ಇವರ ನೇತೃತ್ವದಲ್ಲಿ ಅರಳಹಟ್ಟಿ ವಿವಿಧ ಉದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಪತ್ತಿನ ಸಹಕಾರ ಸಂಘವು ಪ್ರಗತಿಪಥದಲ್ಲಿ ಇದೆ ಎಂದುಸಂಘದ ಅಧ್ಯಕ್ಷ ಸಿದ್ಧನಾಥ ಅವಳೇಕರ ಹೇಳಿದರು. 

ಸಂಘದ ವಾರ್ಷಿಕ ಸಭೆಯ ಅಧ್ಯಕತೆ ವಹಿಸಿ ಮಾತನಾಡಿದ ಅವರು ಎರಡು ಕೋಟಿ ರೂಪಾಯಿಗಳ ಸಾಲವನ್ನು ವಿತರಿಸಿದ್ದು, ಬರಗಾಲದ ಪರಿಸ್ಥಿತಿ ಇದ್ದರೂ ಸಹ ರೈತರು ನಿಗದಿತ ಅವಧಿಯಲ್ಲಿ ಸಾಲ ಮರುಪಾವತಿ ಮಾಡ್ತಾ ಇದ್ದಾರೆ ಎಂದು ಹೇಳಿದರು. ರವೀಂದ್ರ ಸನದಿ ತಾನಾಜಿ ಶಿಂಧೆ ಕೇದಾರಿ ನಾಗರಾಳೆ ವೇದಿಕೆ ಮೇಲಿದ್ದರು. 

ಸುರೇಶ ಅವಳೇಕರ, ಸಂಜಯ ಗಿಡ್ಡಿ, ಇಸಾಕ್ ಮುಲ್ಲಾ, ಮಹಾದೇವ ಕಾಂಬಳೆ, ಧೋಂಡಿರಾಮ್ ಅವಳೇಕರ, ಮಂಜುನಾಥ ಪಾಟೀಲ್, ಪ್ರಿಯಾಂಕಾ ಮಾನೆ,  ಮುಕ್ತಾಬಾಯಿ ಅವಳೇಕರ, ಬಾಬಾಸಾಹೇಬ್ ಅವಳೇಕರ, ಶಂಕರ ಪಾಟೀಲ್, ಸಿದ್ಧನಾಥ ಆವಳೇಕರ, ಸದಸ್ಯರು ಸಂಘದ ವತಿಯಿಂದ ರೈತರಿಗೆ ಅನೇಕ ಯೋಜನೆಗಳನ್ನು ತರುವ ಮೂಲಕ ರೈತರ ಅಭಿವೃದ್ಧಿ ನಮ್ಮ ಗುರಿಯಾಗಿದೆ ಎಂದರು.ಕೃಷ್ಣ ಸ್ವಾಗತಿಸಿ, ಶಂಕರ ಪಾಟೀಲ ವರದಿ ವಾಚನ ಮಾಡಿದರು.