ಗ್ರಾಮದೇವಿ ಜಾತ್ರೆ: ಭಕ್ತರಿಗೆ ಹಾಗೂ ಪೊಲೀಸರಿಗೆ ಅಶ್ವಥ್ ವೈದ್ಯ ತಂಡದಿಂದ ಕುಡಿಯುವ ನೀರಿನ ಸೇವೆ

ಗ್ರಾಮದೇವಿ ಜಾತ್ರೆ: ಭಕ್ತರಿಗೆ ಹಾಗೂ ಪೊಲೀಸರಿಗೆ ಅಶ್ವಥ್ ವೈದ್ಯ ತಂಡದಿಂದ ಕುಡಿಯುವ ನೀರಿನ ಸೇವೆ Grama Devi Fair: Drinking water service provided to devotees and police by Ashwath Vaidya team

ಸವದತ್ತಿ 07 : ನಗರದ ಆರಾಧ್ಯ ದೈವ ಗ್ರಾಮದೇವಿಯ ಮಹೋತ್ಸವವು ಅತ್ಯಂತ ಸಡಗರ ಸಂಭ್ರಮದಿಂದ ಜರುಗುತ್ತಿದ್ದು, ಈ ಸಂದರ್ಭದಲ್ಲಿ ಭಕ್ತಾದಿಗಳ ದಾಹ ನೀಗಿಸುವ ಉದ್ದೇಶದಿಂದ ಅಶ್ವಥ್ ವೈದ್ಯ ಹಾಗೂ ಅವರ ತಂಡದ ವತಿಯಿಂದ ಉಚಿತವಾಗಿ ಶುದ್ಧ ಕುಡಿಯುವ ನೀರಿನ ಬಾಟಲಿಗಳನ್ನು ವಿತರಿಸಲಾಯಿತು.ನಾಡಿನ ಮೂಲೆ ಮೂಲೆಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ಅರಮನೆ ಮಂಟಪದ ಹತ್ತಿರ ನಡೆದ ಧಾರ್ಮಿಕ ವಿಧಿವಿಧಾನಗಳಿಗೆ ಸಾಕ್ಷಿಯಾದರು. ಪ್ರಸ್ತುತ ಬೇಸಿಗೆಯ ಪ್ರಖರ ಬಿಸಿಲಿದ್ದರೂ ಸಹ, ಅದನ್ನು ಲೆಕ್ಕಿಸದೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಬಿಸಿಲಿನ ತಾಪದಿಂದ ಭಕ್ತರಿಗೆ ತೊಂದರೆಯಾಗಬಾರದೆಂಬ ಸದುದ್ದೇಶದಿಂದ ಅಶ್ವಥ್ ವೈದ್ಯ ಮತ್ತು ತಂಡದವರು ನೀರಿನ ಸೇವೆ ಒದಗಿಸಿ ಮಾನವೀಯತೆ ಮೆರೆದರು.  

ಮುರಗೋಡ ಪಿಐ ಆಯ್‌.ಎಮ್‌.ಮಠಪತಿ ಅವರ ನೇತೃತ್ವದಲ್ಲಿ ಜನದಟ್ಟಣೆಯನ್ನು ನಿಯಂತ್ರಿಸುತ್ತಿದ್ದ ಮತ್ತು ಬಂದೋಬಸ್ತ್‌ ಕಾರ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿಗೂ ಸಹ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಪೊಲೀಸರ ಕರ್ತವ್ಯ ನಿಷ್ಠೆಯನ್ನು ಗುರುತಿಸಿ ಅವರಿಗೆ ನೆರವಾದ ತಂಡದ ಕಾರ್ಯಕ್ಕೆ ಸಾರ್ವಜನಿಕರಿಂದ ವ್ಯಾಪಕ ಶ್ಲಾಘನೆ ವ್ಯಕ್ತವಾಯಿತು.ಬಳಿಕ ಮಾತನಾಡಿದ ಅವರು ಗ್ರಾಮದೇವಿಯ ದರ್ಶನಕ್ಕೆ ಬರುವ ಭಕ್ತರಿಗೆ ಸೇವೆ ಸಲ್ಲಿಸುವುದು ನಮ್ಮ ಸೌಭಾಗ್ಯ. ತಾಯಿ ಗ್ರಾಮದೇವಿಯು ಸರ್ವ ಭಕ್ತರಿಗೂ ಸುಖ, ಶಾಂತಿ ಹಾಗೂ ಮುಖ್ಯವಾಗಿ ಆರೋಗ್ಯ ಭಾಗ್ಯವನ್ನು ಕರುಣಿಸಲಿ.ಎಂದು ಹೇಳಿದರು. ಸಂದರ್ಭದಲ್ಲಿ ಅಶ್ವಥ್ ವೈದ್ಯ ತಂಡದ ಸದಸ್ಯರು, ಪ್ರಮುಖರು ಹಾಗೂ ನೂರಾರು ಭಕ್ತಾದಿಗಳು ಉಪಸ್ಥಿತರಿದ್ದರು.