ಬಳ್ಳಾರಿ: ಪಾಪದ ದುಡ್ಡಲ್ಲಿ ಸರಕಾರ ಬೀಳಿಸಿದರು ರಾಮುಲು ವಿರುದ್ಧ ಎಚ್ಡಿಕೆ ಕೆಂಡ!
ಬಳ್ಳಾರಿ 26: ಸಚಿವ ಶ್ರೀರಾಮುಲು ವಿರುದ್ಧ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಬಳ್ಳಾರಿಯಲ್ಲಿ ಮಾತನಾಡಿದ ಅವರು, ರಾಮುಲು ವಿರುದ್ಧ ಕಿಡಿಕಾರುವ ಮುನ್ನ, ಒಂದು ಉದಾಹರಣೆಯನ್ನೂ ಕೊಟ್ಟರು. ಎಸ್ಟಿ ಸಮುದಾಯದ ಹೆಣ್ಣು ಮಗಳು ಸಿಎಂ ಯಡಿಯೂರಪ್ಪ ಬಳಿ, ಸಚಿವರ ಬಳಿ ತಮ್ಮ ಗೋಳು ಹೇಳಿಕೊಂಡಾಗ ಯಾರೂ ಕೇಳಲಿಲ್ಲವಂತೆ. ಆಕೆ ಕೊನೆಗೆ ತ ನ್ನ ಕಿಡ್ನಿ ಮಾರಾಟ ಮಾಡಿ ಜೀವನ ಮಾಡ್ತೇನೆ ಎಂದಳು. ಆಗ ನಾನು ಆಕೆಗೆ 1 ಲಕ್ಷ ರೂಪಾಯಿ ಕೊಟ್ಟೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ರಾಮುಲು ಕೂಡಾ ಎಸ್ಟಿ ಸಮುದಾಯದವರು. ಗದಗ್ ಜಿಲ್ಲೆಯ ಲಕ್ಕವ್ವ ಕೂಡಾ ಎಸ್ಟಿ ಸಮುದಾಯದವರು. ಆಕೆಯ 9 ಹಸುಗಳು ಮೃತಪಟ್ಟಿದ್ದವು. ಜೀವನವೇ ದುಸ್ತರವಾಗಿತ್ತು. ತಮ್ಮ ಸಮುದಾಯಕ್ಕೆ ಸೇರಿದ್ದ ಮಹಿಳೆಗೇ ರಾಮುಲು ಯಾವುದೇ ಸಹಾಯ ನೀಡಲಿಲ್ಲ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ಧಾರೆ.
ಜಾರಕಿಹೊಳಿ ಕುಟುಂಬವನ್ನು ಪರೋಕ್ಷವಾಗಿ ಹೆಸರಿಸಿದ ಕುಮಾರಸ್ವಾಮಿ, ಗೋಕಾಕ್ನವರಿಗೆ ಸಾಹುಕಾರರು ಎಂದು ಟಿವಿಗಳಲ್ಲಿ ಕರೆಯುತ್ತಾರೆ. ಆದ್ರೆ, ಆ ಭಾಗದ ರೈತರಿಗೆ ಸಾಹುಕಾರರು ಹಣ ಕೊಟ್ಟಿಲ್ಲ ಎಂದು ಕುಮಾರಸ್ವಾಮಿ ಕಿಡಿಕಾರಿದರು
ಬೆಳಗಾವಿಗೆ ಮೋಹನ್ ಭಾಗವತ್ ಭೇಟಿ: 9 ದಿನ ಡ್ರೋನ್ ಹಾರಾಟಕ್ಕೆ ನಿಷೇಧ, 3 ಸ್ಥಳಗಳು ರೆಡ್ ಝೋನ್ : ಡಿಸಿ ಆದೇಶ
ಕೋಲ್ಕತ್ತಾ ಟಿಎಂಸಿ ಕಚೇರಿ ವಿವಾದದ ಮೇಲೆ ಬಂಡಾಯ ಗುಂಪಿಗೆ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ, “ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿಕೆ
ಸಿಸಿಬಿ ಪೊಲೀಸರ ದಾಳಿ–4.96 ಲಕ್ಷ ಮೌಲ್ಯದ ಹೆರಾಯಿನ್ ವಶ, ಓರ್ವ ಬಂಧನ
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ 