ಶಿರಢಾಣ ನದಿ ಪಾತ್ರದ ಜನರಿಗೆ ಸರಕಾರಿ ಗೈರಾಣ ಜಮೀನು ನೀಡಬೇಕು: ಶ್ರೀಕಾಂತ ತಳವಾರ
Government should give unclaimed land to people living in the Shiradhana river basin: Srikanth Talaw
ಹುಕ್ಕೇರಿ 23: ತಾಲೂಕಿನ ಶಿರಢಾಣ ಗ್ರಾಮದ ಹತ್ತಿರ ಘಟಪ್ರಭಾ ಹಿನ್ನಿರಿನಿಂದ ಮುಳುಗಡೆ ಹೊಂದುತ್ತಿರುವ ಜನರಿಗೆ ಸರಕಾರಿ ಗೈರಾಣು ಜಮಿನು ನೀಡಬೇಕು ಎಂದು ದಲಿತ ಮುಖಂಡ ಶ್ರೀಕಾಂತ ತಳವಾರ ನೇತೃತ್ವದಲ್ಲಿ ಪ್ರತಿಭಟನೆ ಜರುಗಿತು.
ಸೋಮವಾರ ಹುಕ್ಕೇರಿ ಆಡಳಿತ ಸೌಧದ ಮುಂದೆ ಶಿರಡಾಣ ಗ್ರಾಮಸ್ಥರು ಮತ್ತು ಸಂತ್ರಸ್ಥರು ಪ್ರತಿಭಟನೆ ಜರುಗಿಸಿ ಗ್ರೇಡ 2 ತಹಸಿಲ್ದಾರ ಪ್ರಕಾಶ ಕಲ್ಲೋಳಿ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿ ಘಟಪ್ರಭಾ ಮತ್ತು ಹಿರಣ್ಯಕೇಶಿ ನದಿಗಳ ನೀರು ಪ್ರತಿ ವರ್ಷ ಮನೆಗಳಿಗೆ ನುಗ್ಗಿ ಹಾನಿ ಅನುಭವಿಸುತ್ತಿದ್ದೆವೆ ಕಾರಣ ಗ್ರಾಮದ ಬ್ಲಾಕ್ ನಂಬರ 29 ನೇದ್ದರ 10 ಎಕರೆ ಜಮಿನಿನಲ್ಲಿ ವಾಸಿಸಲು ಹಕ್ಕು ಪತ್ರ ನೀಡುವಂತೆ ಆಗ್ರಹಿಸಿದರು.‘
ದಲಿತ ಮುಖಂಡ ಶ್ರೀಕಾಂತ ತಳವಾರ ಮಾದ್ಯಮಗಳೊಂದಿಗೆ ಮಾತನಾಡುತ್ತಾ ಶಿರಢಾಣ ಗ್ರಾಮದ 10 ಎಕರೆ ಗೈರಾಣ ಜಮಿನನ್ನು ನಿರಾಶ್ರಿತ ವಿವಿಧ ಜಾತಿ ಜನಾಂಗದ ಜನರಿಗೆ ನೀಡ ಬೇಕು ಎಂದು ಆಗ್ರಹಿಸಿ ಈಗಾಗಲೇ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಲಾಗಿದೆ ಕಾರಣ ಇನ್ನೂ ಮುಂದೆ ಹುಕ್ಕೇರಿ ತಹಸಿಲ್ದಾರ ಕಛೇರಿ ಎದುರು ಪೆಂಡಾಲ್ ಹಾಕಿ ಸತ್ಯಾಗ್ರಹ ಹಮ್ಮಿಕೋಳ್ಳಲು ನಿರ್ಧರಿಸಲಾಗಿದೆ ಕಾರಣ ಕೂಡಲೆ ಸರ್ಕಾರ ನಮ್ಮ ಮನವಿಗೆ ಸ್ಪಂದಿಸಿ ಗ್ರಾಮದ ವಿವಿಧ ಜಾತಿಯ ಫಲಾನುಭವಿಗಳಿಗೆ ಹಕ್ಕು ಪತ್ರ ನೀಡು ವಾಸಿಸಲು ಅನಕೂಲ ಮಾಡಬೇಕು ಎಂದು ಸಕಾರಕ್ಕೆ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿ ಉತ್ತರ ಕರ್ನಾಟಕ ಸಂಚಾಲಕ ಕಿರಣ ಶಿವಾಳೆ, ಅಶೋಕ ವಾಡೆದಾರ, ದುರ್ಗಪ್ಪಾ ಪೂಜೇರಿ, ಮಲಗೌಡಾ ಪಾಟೀಲ, ಬಸವಣ್ಣಿ ವಾರೆಪ್ಪಗೋಳ, ಮುತ್ತುರಾಜ ಮ್ಯಾಗೇರಿ, ಶಂಕರ ವಾಡೆರಿ, ಮಹಾಂತೇಶ ವಗ್ಗಣ್ಣವರ ಮೊದಲಾದವರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 