40ನೇ ದಿನಕ್ಕೆ ಕಾಲಿಟ್ಟ ಸರಕಾರಿ ವೈದ್ಯಕೀಯ ಕಾಲೇಜು ಹೋರಾಟ
Government medical college protest enters 40th day
ವಿಜಯಪುರ, 28 : 40 ನೇ ದಿನಕ್ಕೆ ಕಾಲಿಟ್ಟ ಸರಕಾರಿ ವೈದ್ಯಕೀಯ ಕಾಲೇಜು ಹೋರಾಟ ಸಮಿತಿಯು ರಕ್ತ ಸಹಿ ಸಂಗ್ರಹಣ ಚಳುವಳಿಯನ್ನು ಹಮ್ಮಿಕೊಳ್ಳಲಾಗಿತ್ತು. ಈ ರಕ್ತದಲ್ಲಿ ಸಹಿಸಂಗ್ರಹ ಮಾಡಿದ ಬಟ್ಟೆಯನ್ನು ಮಾನ್ಯ ಜಿಲ್ಲಾಧಿಕಾರಿ ಗಳ ಮೂಲಕ ಮಾನ್ಯ ಮುಖ್ಯಮಂತ್ರಿಗಳಿಗೆ ಕಳಿಸಿಕೊಡಲಾಯಿತು.
ಈ ಹೋರಾಟಕ್ಕೆ ವಿಜಯಪುರ ಜಿಲ್ಲೆಯ ಸಾರ್ವಜನಿಕರು, ವಿದ್ಯಾರ್ಥಿಗಳು, ಯುವಜನರು, ಮಹಿಳೆಯರು, ಹೋರಾಟಗಾರರು ಬೆಂಬಲಿಸಿ ರಕ್ತದ ಮೂಲಕ ಸಹಿ ಹಾಕಿದರು. ಈ ರಕ್ತ ಸಹಿ ಸಂಗ್ರಹ ಜನರ ಒಗ್ಗಟ್ಟು ಮತ್ತು ತ್ಯಾಗದ ಶಕ್ತಿಯನ್ನು ಬಿಂಬಿಸುತ್ತದೆ. ಇದು ಸರಕಾರಕ್ಕೆ ಒಗ್ಗಟ್ಟು ಮತ್ತು ಹೋರಾಟದ ಶಕ್ತಿಯನ್ನು ತೋರಿಸುತ್ತದೆ.
ಈ ರಕ್ತ ಸಹಿ ಚಳುವಳಿ ಹಿಂಸಾತ್ಮಕ ಪ್ರತಿರೋಧದ ಬದಲು ಅಹಿಂಸೆಯ ಶಸ್ತ್ರ. ಈ ಒಂದು ರಕ್ತ ಸಹಿ ಸಂಗ್ರಹ ಚಳುವಳಿ ಸರಕಾರಿ ವೈದ್ಯಕೀಯ ಕಾಲೇಜಿಗಾಗಿ ಜೀವನವನ್ನೆ ಒತ್ತೆ ಇಡುವ ಸನ್ನದ್ದತೆ ಎಂಬ ಸಂದೇಶವು ಸರಕಾರಕ್ಕೆ ಹೋರಾಟಗಾರರ ದೃಡ ನಿಶ್ಚಯವನ್ನು ತಿಳಿಸುತ್ತದೆ.
ಈ ನಿಯೋಗದಲ್ಲಿ ಹೋರಾಟ ಸಮಿತಿಯ ಅರವಿಂದ ಕುಲಕರ್ಣಿ, ಅಕ್ರಂಮಾಷಳಕರ, ಮಲ್ಲಿಕಾರ್ಜುನ ಬಟಗಿ, ಸಿದ್ದಲಿಂಗ ಬಾಗೇವಾಡಿ,ಲಲಿತಾ ಬಿಜ್ಜರಗಿ, ಸುರೇಶ ಬಿಜಾಪುರ, ಲಕ್ಷ್ಮಣ ಹಂದ್ರಾಳ, ಭರತಕುಮಾರ ಹೆಚ್ ಟಿ, ಶ್ರೀನಾಥ ಪೂಜಾರಿ, ಲಕ್ಷ್ಮಣ ಕಂಬಾಗಿ, ನೀಲಾಂಬಿಕಾ ಬಿರಾದರ, ಮೀನಾಕ್ಷಿ ಸಿಂಗೆ, ಕಿರಣ ಮೇಲಿಕೆರಿ, ಕಾವೇರಿ ರಜಪೂತ, ಎಮ್ ಎಮ್ ಗುರಿಕಾರ ಹಾಗೂ ಮುಂತಾದವರು ಭಾಗವಹಿಸಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 