ಸರ್ಕಾರ ನೀಡಿದ ಸೈಕಲ್ ಪಾಲಕರು, ಸಂಬಂಧಿಕರು ಬಳಸಬಾರದು: ರಮೇಶ ಕರೆ
ಹುಕ್ಕೇರಿ 24: ವಿದ್ಯಾರ್ಥಿಗಳಿಗೆ ನೀಡಿದ ಸೈಕಲ್ಗಳನ್ನು ಪಾಲಕರು ಹಾಗೂ ಸಂಬಂಧಿಕರು ತಮ್ಮ ಮನೆಯ ಚಟುವಟಿಕೆಗಳಿಗೆ ಬಳಸಬಾರದು.ಜತೆಗೆ ಯಾರಾದರೂ ಬಳಸುತ್ತಿರುವುದನ್ನು ಶಾಲಾ ಉಸ್ತುವಾರಿ ಸಮಿತಿಯವರು ಗಮನಿಸದರೆ ತಕ್ಷಣ ಅಂತಹವರಿಗೆ ತಿಳುವಳಿಕೆ ಹೇಳಬೇಕೆಂದು ಉದ್ಯಮಿ ಪೃಥ್ವಿ ರಮೇಶ ಕತ್ತಿ ನುಡಿದರು.
ಅವರು ಸೋಮವಾರದಂದು ಸ್ಥಳೀಯ ಸರಕಾರಿ ಉರ್ದು ಪ್ರೌಢಶಾಲೆಯಲ್ಲಿ ಪ್ರಸಕ್ತ ಶೈಕ್ಷಣೀಕ ವರ್ಷದ ಸೈಕಲ್ಗಳನ್ನು ಮಕ್ಕಳಿಗೆ ವಿತರಿಸಿ ಮಾತನಾಡಿದರು.ಸರಕಾರ ಶಾಲಾ ಹಾಜರಾತಿ ಹಾಗೂ ಮಕ್ಕಳ ದೈಹಿಕ ಕ್ಷಮತೆ ಹೆಚ್ಚಿಸಲು ಈ ಯೋಜನೆ ಜಾರಿಗೆ ತಂದಿದೆ ಎಂದರು. ವಿದ್ಯಾರ್ಥಿಗಳು ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಸಲಹೆಯಿತ್ತರು. ಎಸ್.ಡಿ.ಎಂ.ಸಿ ಸದಸ್ಯ ಕೇಸರ ಮೊಖಾಶಿ, ಪುರಸಭೆ ಸದಸ್ಯ ರಾಜೇಶ ಮುನ್ನೋಳಿ ಅವರು ಮಾತನಾಡಿ ಖಾಸಗಿ ಶಾಲೆಗಳ ಪೈಪೋಟಿ ಎದುರಿಸಲು ಸರಕಾರ ಬಡ ಮಕ್ಕಳಿಗೆ ಹಲವಾರು ಯೋಜನೆ ಜಾರಿಗೆ ತಂದಿದೆ ಎಂದರು.ಅವುಗಳ ಅನುಷ್ಠಾನ ಮತ್ತು ಬಳಕೆ ಶಾಲಾ ಸಿಬ್ಬಂದಿ ಹಾಗೂ ಪಾಲಕರು ಮುಂದಾಗಬೇಕೆಂದು ಕರೆ ನೀಡಿದರು.
ಎಸ್.ಡಿ.ಎಂ.ಸಿ ಅಧ್ಯಕ್ಷ ಅಜಾದ ಮುಲ್ಲಾ, ಪುರಸಭೆ ಮಾಜಿ ಉಪಾಧ್ಯಕ್ಷ ಶಹಜಾನ ಬಡಗಾಂವಿ, ಹೈದರಲಿ ಮುಜಾವರ, ಅಸ್ಲಂ ಶೇಖಬಡೆ, ಜಾವೇದ ಸೈಯದ್, ಗುಲಾಬ ತೇರಣಿ ಮತ್ತಿತರರಿದ್ದರು. ಎ.ಜಿ.ಸೊಲ್ಲಾಪೂರೆ ಸ್ವಾಗತಿಸಿದರು. ಎನ್.ಎನ್.ವಾಚಮೇಕರ ನಿರೂಪಿಸಿದರು. ಮುಖ್ಯೋಪಾಧ್ಯಾಯಿನಿ ಕಲ್ಪನಾ ಲೋಖಂಡೆ ವಂದಿಸಿದರು.
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ 