6ರಂದು ಸದ್ವಿಚಾರ ಗೋಷ್ಠಿ

6ರಂದು ಸದ್ವಿಚಾರ ಗೋಷ್ಠಿ  Goodwill meeting on the 6th

ಸಿಂದಗಿ 03: ಪಟ್ಟಣದ ಸಾರಂಗಮಠ ಆವರಣದಲ್ಲಿ ಸೆ.6 ಸಂಜೆ 7 ಗಂಟೆಗೆ ಅನಂತನ ಹುಣ್ಣಿಮೆ ನಿಮಿತ್ತ ಸಾರಂಗಮಠ-ಗಚ್ಚಿನಮಠದ ಚೆನ್ನವೀರಸ್ವಾಮೀಜಿ ಪ್ರತಿಷ್ಠಾನ ಅಡಿಯಲ್ಲಿ 346ನೇ ಸದ್ವಿಚಾರ ಗೋಷ್ಠಿ ಹಮ್ಮಿಕೊಳ್ಳಲಾಗಿದೆ. 

ಸಾರಂಗಮಠ-ಗಚ್ಚಿನಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸುವರು. ಸಾರಂಗಮಠ-ಗಚ್ಚಿನಮಠದ ಉತ್ತರಾಧಿಕಾರಿ ಡಾ.ವಿಶ್ವಪ್ರಭುದೇವ ಶಿವಾಚಾರ್ಯ ಸ್ವಾಮೀಜಿ ಸಮ್ಮುಖ ವಹಿಸುವರು. ವಿಜಯಪುರದ ವಿಶ್ರಾಂತ ಪ್ರಾಧ್ಯಾಪಕ ಡಾ.ಎಂ.ಎಸ್‌. ವೀರಘಂಟಿಮಠ ಅವರು ಸಂತ ಕಬೀರದಾಸರ ವಿಚಾರದಾರೆಗಳು ವಿಷಯ ಕುರಿತು ಉಪನ್ಯಾಸ ನಿಡುವರು ಎಂದು ಪ್ರತಿಷ್ಠಾನದ ಪ್ರಕಟಣೆ ತಿಳಿಸಿದೆ.