ಮಕ್ಕಳಿಗೆ ಉತ್ತಮ ಗುಣಮಟ್ಟದಇಂದಿನ ಅಗತ್ಯ: ಪಟೇಲ್

ಮಕ್ಕಳಿಗೆ ಉತ್ತಮ ಗುಣಮಟ್ಟದಇಂದಿನ ಅಗತ್ಯ: ಪಟೇಲ್  Good quality education for children is the need of the hour: Patel

ಕೊಪ್ಪಳ 9:  ಇಂದಿನ ಮಕ್ಕಳೇ ಈ ನಾಡಿನ ಭಾವಿ ಪ್ರಜೆಗಳಾಗಿದ್ದು ಅವರ ಭವಿಷ್ಯ ಉಜ್ವಲ ಗೊಳ್ಳಲು ಅವರಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವದು ಇಂದಿನ ಅಗತ್ಯವಾಗಿದೆ ಎಂದು ಕೊಪ್ಪಳ ನಗರಸಭೆಯ ಅಧ್ಯಕ್ಷ  ಅಮ್ಜದ್ ಪಟೇಲ್ ಹೇಳಿದರು.

ಅವರು ಮಂಗಳವಾರದಂದು ನಗರದ  ಗೌರಿ ಅಂಗಳ ಓಣಿಯ  ಉರ್ದು ಸರಕಾರಿ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆಯನ್ನು  ಹಾಗೂ ಶಾಲೆಯ ಉತ್ತಮ ಶಿಕ್ಷಕಿ ಪ್ರಶಸ್ತಿ ಸಮಾರಂಭದಲ್ಲಿ ಉದ್ಘಾಟಕರಾಗಿ ಆಗಮಿಸಿ ಕಾರ್ಯಕ್ರಮ ವನ್ನು ಉದ್ದೇಶ  ಉದ್ದೇಶಿಸಿ ಮಾತನಾಡಿದರು. 

ಈ ಕಾರ್ಯಕ್ರಮದ ಸಾನಿಧ್ಯವನ್ನು ಧರ್ಮ ಗುರುಗಳಾದ ಮೌಲಾನ ಮುಫ್ತಿ ನಜೀರ್ ಅಹ್ಮದ್ ತಸ್ಕಿನ್ ರವರು ವಹಿಸಿದ್ದರು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕ ಶಿಕ್ಷಣ ಅಧಿಕಾರಿಗಳಾದ ಹನುಮಂತಪ್ಪನವರು ವಹಿಸಿದರು. ಈ ಸಂದರ್ಭದಲ್ಲಿ ಶಿಕ್ಷಣ ಇಲಾಖೆಯ ಬಿ ಆರ್ ಸಿ ಆದ ಮಹಿಬೂಬ್ ಮೈಮುದ್ದೀನ್ ಇನ್ನೂ ಅನೇಕ ಶಿಕ್ಷಣ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು ಮತ್ತು ಸಮಾಜದ ಮುಖಂಡರಾದ ಮಹಿಬೂಬ್ ಮಚ್ಚಿ, ರಜಾಕ್ ಸಾಬ್ ಜಾಫರ್ ಸಾಬ್, ತಟ್ಟಿ ಬಶೀರ್ ಅತ್ತಾರ್, ಆಸೀಫ್ ಹನಗಿ ಶಾಲೆಯ ಮುಖ್ಯೋಪಾಧ್ಯರಾದ ವಾಹಿದ ಬೇಗಂ ಶಿಕ್ಷಕರಾದ ಶರಣಪ್ಪ ರೆಡ್ಡಿರ್ ಫಾತಿಮಾ ಬೇಗಮ್ ಮತ್ತಿತರರು ಉಪಸ್ಥಿತರಿದ್ದರು