ನಾಟಕಗಳಿಂದ ಸಮಾಜಕ್ಕೆ ಒಳ್ಳೆಯ ಸಂದೇಶ
Good message to society through plays
ಹೂವಿನಹಡಗಲಿ 26: ನಾಟಕದಿಂದ ಸಮಾಜದ ಅಂಕುಡೊಂಕು ಸರಿಪಡಿಸುತ್ತವೆ ಎಂದು ಜೆ.ಎಸ್.ಎಸ್.ಕಾಲೇಜಿನ ಉಪನ್ಯಾಸಕ ನೆಪೋಲಿಯನ್ ಹೇಳಿದರು. ತಾಲೂಕಿನ ನಂದಿಹಳ್ಳಿ ರಂಗಮಂದಿರ ಆವರಣದಲ್ಲಿ ಗುರುವಾರ ಕಂಠಿ ಬಸವೇಶ್ವರ ಸ್ವಾಮಿಯ ರಥೋತ್ಸವ ನಿಮಿತ್ತ ಗ್ರಾಮದ ಸ್ಥಳೀಯ ಕಲಾವಿದರಿಂದ "ಸಾವು ತಂದ ಸೌಭಾಗ್ಯ " ಸಾಮಾಜಿಕ ನಾಟಕ ಸಮಾರಂಭದಲ್ಲಿ ಮಾತನಾಡಿ ನಾಟಕಗಳು ಕೇವಲ ಮನರಂಜನೆಯಲ್ಲ, ಬದಲಾಗಿ ಸಾಮಾಜಿಕ ಬದಲಾವಣೆಗೆ ಪ್ರೇರೇಪಿಸುವ ಪ್ರಬಲ ಸಾಧನಗಳಾಗಿವೆ ಎಂದ ಅವರು ಕೆಲ ನಾಟಕದ ದೃಶ್ಯ ಗಳನ್ನು ಹೇಳಿದರು. ಜಿಲ್ಲಾ ಬಿಜೆಪಿ ಮುಖಂಡ ರಾದ ಎಂ.ಬಿ.ಬಸವರಾಜ ಮಾತನಾಡಿ ಸಮಾಜದ ಪ್ರತಿಬಿಂಬ ನಾಟಕಗಳು ಸಮಕಾಲೀನ ಸಮಾಜದ ವಾಸ್ತವಗಳನ್ನು, ಸಮಸ್ಯೆಗಳನ್ನು, ಮತ್ತು ಮೌಲ್ಯಗಳನ್ನು ವೇದಿಕೆಯ ಮೇಲೆ ತರುತ್ತವೆ, ಪ್ರೇಕ್ಷಕರು ತಮ್ಮನ್ನು ತಾವು ಆ ಪಾತ್ರಗಳಲ್ಲಿ ನೋಡಿಕೊಳ್ಳುವಂತೆ ಮಾಡುತ್ತವೆ ಎಂದರು. ಮಾಜಿ ಗ್ರಾ.ಪಂ.ಅದ್ಯಕ್ಷ ಕಂಠಿ ವೀರೇಶ, ವಿ.ಬಿ.ಮಲ್ಲಿಕೇಶಪ್ಪ, ಶಿಕ್ಷಕರಾದ ಅರುಣಿ ಸುರೇಶ, ವಿ.ಬಿ.ಜಗದೀಶ್, ಅರುಣಿ ಜಗದೀಶ್ ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 