ಹನುಮಂತೇಶ್ವರ ದೇವಸ್ಥಾನದ ಸುವರ್ಣ ಮಹೋತ್ಸವ ಹಾಗೂ ಹನುಮ ಜಯಂತಿ
Golden Jubilee of Hanumantheshwara Temple and Hanuman Jayanti
ಲೋಕದರ್ಶನ ವರದಿ
ಮಹಾಲಿಂಗಪುರ 02: ಸ್ಥಳೀಯ ಜಿಎಲ್ಬಿಸಿ ಆವರಣದಲ್ಲಿರುವ ಶ್ರೀ ಹನುಮಂತೇಶ್ವರ ದೇವಸ್ಥಾನದ ಸುವರ್ಣ ಮಹೋತ್ಸವ ಹಾಗೂ ಹನುಮ ಜಯಂತಿ ಗುರುವಾರ ಆಚರಿಸಲಾಯಿತು. ತನ್ನಿಮಿತ್ತ ಹನುಮ ಮೂರ್ತಿಯನ್ನು ಹೂಗಳಿಂದ ಅಲಂಕರಿಸಿದರೆ ದೇವಸ್ಥಾವನ್ನು ಹೂಗಳು ಮತ್ತು ತಳಿರು ತೋರಣಗಳಿಂದ ಅಲಂಕರಿಸಲಾಗಿತು ಇಡೀ ಆವರಣದಲ್ಲಿ ಹಬ್ಬದ ಕಳೆ ಎದ್ದು ಕಾಣುತ್ತಿತ್ತು. ಮುಂಜಾನೆ ರುದ್ರಾಭೀಷೇಕ, ನಾಮಕರಣ, ಪವಮಾನ ಹೋಮ ನಂತರ ಮಧ್ಯಾಹ್ನ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.ಅರುಣ ಗುರೂಜಿ, ವಿಶಾಲ ಗುರೂಜಿ, ಮಹಾಲಿಂಗ ಗುರವ, ಕೆಂಚಪ್ಪ ಧಾರ್ಮಿಕ ಕಾರ್ಯ ನೆರವೇರಿಸಿದರು.
ಜೋಗುಳ ಹಾಡಿ ನಾಮಕರಣ ಮಾಡಿದ್ದು, ಹೋಮ ಹವನ ಗಮನ ಸೆಳೆದವು. 1976 ರಲ್ಲಿ ನಿರ್ಮಾಣವಾದ ಈ ದೇವಾಲಯದ ನಿರ್ಮಾಣ ಕಾರ್ಯದ ಸಂಸ್ಥಾಪಕ ಅಧ್ಯಕ್ಷ ನಿವೃತ್ತ ಎಇಇ ಎಂ.ಆರ್.ಪಾಟೀಲ, ಸಿ.ಡಿ.ಜಾಗನೂರ, ಜಿಎಲ್ಬಿಸಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ ಎಂ.ಕೆ.ಯಡೆಪ್ಪನವರ ಸಿಬ್ಬಂದಿಯವರಾದ ಬಿ.ಕೆ.ಪರೀಟ, ಎಂ.ಎಂ.ಡೋಣಿ, ಪಿ.ಆರ್.ಬಿರಾಜನವರ, ಎಸ್.ಎಂ.ಹುದ್ದಾರ, ಎಂ.ವೈ.ತೋಟದ, ಕೆ.ಎಸ್.ಹಿರೇಮಠ, ಎಂ.ವಿ.ಹಿಟ್ಟಿನಮಠ, ಜಿ.ಎಸ್.ಮಠಪತಿ, ಎಂ.ಎಸ್.ಮುಗಳಖೋಡ, ಚನಬಸು ಯರಗಟ್ಟಿ, ಎಂ.ಟಿ.ರೂಗಿ, ಎಸ್.ಎಚ್.ಹಿರೇಮಠ, ಅಶೋಕ ಬಾಣಕಾರ, ಚಿದಾನಂದ ಚಿಂದಿ ಮುಂತಾದವರು ಈ ಸತ್ಕಾರ್ಯದಲ್ಲಿ ಭಾಗಿಯಾಗಿದ್ದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 