ಗೋಕಾಕ ಜಾತ್ರೆಯಲ್ಲಿ ಮೆರಗು ಪಡೆದ ಬಯಲಾಟಗಳು
Gokak fair: Theatre shows
ಗೋಕಾಕ 07: ಗೋಕಾವಿ ದ್ಯಾಮವ್ವ ಜಾತ್ರೆಯ ನಿಮಿತ್ಯ ರಥಗಳು ನಿಂತಲ್ಲಿ ಇಡೀ ರಾತ್ರಿ ವಿವಿಧ ಬಯಲಾಟಗಳು ಪ್ರದರ್ಶನಗೊಂಡು ಜಾತ್ರೆಯ ಮೆರುಗು ಹೆಚ್ಚಿಸಿದವು.ನಗರದ ಅಪ್ಸರಾ ಕೂಟ, ದ್ಯಾಮವ್ವನಗುಡಿ ಮುಂದೆ ಲಕ್ಷ್ಮೀದೇವಿ ಬೈಲಾಟ ಸಂಘದವರು, ಲಕ್ಷ್ಮಣ ಅವರಗೋಳ ನೇತೃತ್ವದಲ್ಲಿ ಸತ್ಯವಾನ ಸಾವಿತ್ರಿ, ಕೊಳವಿ ಹಣಮಂತ ದೇವಸ್ಥಾನದ ಮುಂದೆ ಜಡೀಸಿದ್ದೇಶ್ವರ ಬೈಲಾಟ ಸಂಘದ ಡಾ.ಎಸ್.ಪಿ.ಹತಪಾಕಿ ಅವರ ನೇತೃತ್ವದಲ್ಲಿ ಶ್ರೀಕೃಷ್ಣ ಪಾರಿಜಾತ,ರವಿವಾರ ಪೇಟೆ ಲಕ್ಷ್ಮೀದೇವಿ ದೇವಸ್ಥಾನದ ಹತ್ತಿರದಲ್ಲಿ ನಾಮದೇವ ಹರಿಜನ ಅವರ ನೇತೃತ್ವದಲ್ಲಿ ಸಂಗ್ಯಾ-ಬಾಳ್ಯಾ ಅರ್ಥಾತ್ ಮಿತ್ರದ್ರೋಹಿ ಮತ್ತು ನಿಜಗುಣ ಶಿವಯೋಗಿ ಎಂಬ ಬೈಲಾಟಗಳು ಸುಂದರವಾಗಿ ಮೂಡಿಬಂದು ಜಾಗತಿಕ ಸಂದರ್ಭದಲ್ಲಿಯೂ ಪುರುಷ, ಮಹಿಳೆ ಮತ್ತು ಯುವಕರು ಜಾನಪದ ಕಲೆಯನ್ನು ನೋಡಿ ರಂಜನೆ ಪಡೆದರು.
ಗೋಕಾಕ ಗೆಳೆಯ ಬಳಗದ ವತಿಯಿಂದ ಜಾನಪದ ಬೈಲಾಟ ಕಲಾವಿದರನ್ನು ಗೌರವಿಸಿದ ಸಾಹಿತಿ ಹಾಗೂ ಕಲಾವಿದ ಪ್ರಾ.ಜಯಾನಂದ ಮಾದರ ಗೋಕಾವಿ ಜಾನಪದ ಕಲಾವಿದ ತವರು ಭೂಮಿಯಾಗಿದ್ದು, ಅದರಲ್ಲೂ ಜಾನಪದ ಬೈಲಾಟ ಆಡುವ ಸ್ಥಳೀಯ ಕಲಾವಿದರಿಗೆ ಅವಕಾಶ ಕಲ್ಪಿಸಿದ ಜಾತ್ರಾ ಕಮೀಟಿಯ ಅಧ್ಯಕ್ಷರು ಹಾಗೂ ಜನಪ್ರಿಯ ಶಾಸಕರು ರಮೇಶ ಜಾರಕಿಹೊಳಿ ಹಾಗೂ ಸದಸ್ಯರು ಅಭಿನಂದನಾರ್ಹರು ಎಂದರು. ಹಿರಿಯ ರಂಗಕರ್ಮಿ ಈಶ್ವರಚಂದ್ರ ಬೆಟಗೇರಿ, ಹಿರಿಯ ಸಾಹಿತಿ ಡಾ.ಲಕ್ಷ್ಮಣ ಚೌರಿ, ಯೋಗ ಗುರು ಆನಂದ ಸೋರಗಾವಿ, ಸಾಹಿತಿ ವಿದ್ಯಾರೆಡ್ಡಿ ಇದ್ದರು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 