ಗೋಕಾಕ ಜಾತ್ರೆಯಲ್ಲಿ ಮೆರಗು ಪಡೆದ ಬಯಲಾಟಗಳು
Gokak fair: Theatre shows
ಗೋಕಾಕ 07: ಗೋಕಾವಿ ದ್ಯಾಮವ್ವ ಜಾತ್ರೆಯ ನಿಮಿತ್ಯ ರಥಗಳು ನಿಂತಲ್ಲಿ ಇಡೀ ರಾತ್ರಿ ವಿವಿಧ ಬಯಲಾಟಗಳು ಪ್ರದರ್ಶನಗೊಂಡು ಜಾತ್ರೆಯ ಮೆರುಗು ಹೆಚ್ಚಿಸಿದವು.ನಗರದ ಅಪ್ಸರಾ ಕೂಟ, ದ್ಯಾಮವ್ವನಗುಡಿ ಮುಂದೆ ಲಕ್ಷ್ಮೀದೇವಿ ಬೈಲಾಟ ಸಂಘದವರು, ಲಕ್ಷ್ಮಣ ಅವರಗೋಳ ನೇತೃತ್ವದಲ್ಲಿ ಸತ್ಯವಾನ ಸಾವಿತ್ರಿ, ಕೊಳವಿ ಹಣಮಂತ ದೇವಸ್ಥಾನದ ಮುಂದೆ ಜಡೀಸಿದ್ದೇಶ್ವರ ಬೈಲಾಟ ಸಂಘದ ಡಾ.ಎಸ್.ಪಿ.ಹತಪಾಕಿ ಅವರ ನೇತೃತ್ವದಲ್ಲಿ ಶ್ರೀಕೃಷ್ಣ ಪಾರಿಜಾತ,ರವಿವಾರ ಪೇಟೆ ಲಕ್ಷ್ಮೀದೇವಿ ದೇವಸ್ಥಾನದ ಹತ್ತಿರದಲ್ಲಿ ನಾಮದೇವ ಹರಿಜನ ಅವರ ನೇತೃತ್ವದಲ್ಲಿ ಸಂಗ್ಯಾ-ಬಾಳ್ಯಾ ಅರ್ಥಾತ್ ಮಿತ್ರದ್ರೋಹಿ ಮತ್ತು ನಿಜಗುಣ ಶಿವಯೋಗಿ ಎಂಬ ಬೈಲಾಟಗಳು ಸುಂದರವಾಗಿ ಮೂಡಿಬಂದು ಜಾಗತಿಕ ಸಂದರ್ಭದಲ್ಲಿಯೂ ಪುರುಷ, ಮಹಿಳೆ ಮತ್ತು ಯುವಕರು ಜಾನಪದ ಕಲೆಯನ್ನು ನೋಡಿ ರಂಜನೆ ಪಡೆದರು.
ಗೋಕಾಕ ಗೆಳೆಯ ಬಳಗದ ವತಿಯಿಂದ ಜಾನಪದ ಬೈಲಾಟ ಕಲಾವಿದರನ್ನು ಗೌರವಿಸಿದ ಸಾಹಿತಿ ಹಾಗೂ ಕಲಾವಿದ ಪ್ರಾ.ಜಯಾನಂದ ಮಾದರ ಗೋಕಾವಿ ಜಾನಪದ ಕಲಾವಿದ ತವರು ಭೂಮಿಯಾಗಿದ್ದು, ಅದರಲ್ಲೂ ಜಾನಪದ ಬೈಲಾಟ ಆಡುವ ಸ್ಥಳೀಯ ಕಲಾವಿದರಿಗೆ ಅವಕಾಶ ಕಲ್ಪಿಸಿದ ಜಾತ್ರಾ ಕಮೀಟಿಯ ಅಧ್ಯಕ್ಷರು ಹಾಗೂ ಜನಪ್ರಿಯ ಶಾಸಕರು ರಮೇಶ ಜಾರಕಿಹೊಳಿ ಹಾಗೂ ಸದಸ್ಯರು ಅಭಿನಂದನಾರ್ಹರು ಎಂದರು. ಹಿರಿಯ ರಂಗಕರ್ಮಿ ಈಶ್ವರಚಂದ್ರ ಬೆಟಗೇರಿ, ಹಿರಿಯ ಸಾಹಿತಿ ಡಾ.ಲಕ್ಷ್ಮಣ ಚೌರಿ, ಯೋಗ ಗುರು ಆನಂದ ಸೋರಗಾವಿ, ಸಾಹಿತಿ ವಿದ್ಯಾರೆಡ್ಡಿ ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 