ನಶಿಸಿ ಹೋಗುವ ಸಂಪತ್ತಿಗೆ ಹೆಚ್ಚಿನ ಮಹತ್ವ ನೀಡಿ
Give more importance to perishable wealth
ಮಹಾಲಿಂಗಪುರ 26: ನಶಿಸಿ ಹೋಗುವ ಸಂಪತ್ತಿಗೆ ಹೆಚ್ಚಿನ ಮಹತ್ವ ನೀಡದೆ, ಆ ಸಂಗ್ರಹದಿಂದಲೆ ದಾನ, ಧರ್ಮ ಮಾಡಿದಲ್ಲಿ, ನಮಗೆರಗುವ ಕಷ್ಟ ಕಾರ್ಪಣಯಗಳು ದೂರವಾಗಿ ನೆಮ್ಮದಿಯ ಬದುಕು ನಿಮ್ಮದಾಗುತ್ತದೆ ಎಂದು ಅಭಿನವ ರೇವಣಸಿದ್ಧ ಪಟ್ಟದೇವರು ಭಕ್ತರಿಗೆ ಆಶಿರ್ವಚನ ನೀಡಿದರು.
ಸ್ಥಳೀಯ ಬನಶಂಕರಿದೇವಿ ದೇವಸ್ಥಾನದಲ್ಲಿ ಗುರುವಾರ ಸಂಜೆ ನಾಲ್ಕನೇ ದಿನದ ನವರಾತ್ರಿ ಉತ್ಸವದ ಆದಿ ಶಕ್ತಿ ಪಾರಾಯಣ ಮಾಡುತ್ತ ಒಳಿತು ಕೆಡುಕುಗಳ ಕುರಿತು ಪ್ರವಚನ ನೀಡಿದರು.
ಕೆಟ್ಟ ಬುಧ್ಧಿ ರಾಕ್ಷಸ ಕುಲ ಪ್ರತಿನಿಧಿಸಿದರೆ, ಒಳ್ಳೆಯ ಆಲೋಚನೆ ಮತ್ತು ಸನ್ಮಾರ್ಗ ದೇವ ಲೋಕವನ್ನು ಪ್ರತಿನಿಧಿಸುತ್ತದೆ.ಭೂಮಿ ಮೇಲಿನ ಪ್ರತಿಯೊಂದು ಚರಾಚರ ವಸ್ತುವಿಗೆ ಅಳಿವು ಇದ್ದೆ ಇದೆ.ಚಿರಂಜೀವಿ ಪಟ್ಟ ಧರಿಸಿದ ಮಹಿಷಾಸುರನ ಅಟ್ಟಹಾಸದಿಂದ ದೇವಲೋಕ ಸಂಕಷ್ಟದಲ್ಲಿರುವಾಗ ದೇವಿ ಪುರಾಣದಲ್ಲಿ ಹುಟ್ಟಿದ ಹುಳು ಒಮ್ಮೆ ಸಾಯಲೆ ಬೇಕು ಎಂಬ ಅಂಶವನ್ನು ವಿವರಿಸಿದರು.
ಮಲ್ಪೆಯ ಪ್ರಕಾಶಜೀ ಮಾತನಾಡಿದರು. ಮಾಳಿ, ಹಡಪದ, ಜೈನ, ಗುರವ ಸಮಾಜ ಬಾಂಧವರುಗಳಿಂದ ಶ್ರೀಗಳಿಗೆ ಮಾಲಾರೆ್ಣ ನಡೆಯಿತು. ಈ ಸಂದರ್ಭದಲ್ಲಿ ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಪ್ರಮುಖರಾದ ಡಾ ಬಿ. ಡಿ.ಸೋರಗಾಂವಿ, ಮಲ್ಲಪ್ಪ ಭಾವಿಕಟ್ಟಿ, ಲಕ್ಕಪ್ಪ ಚಮಕೇರಿ, ಗುರುಪಾದ ಅಂಬಿ, ರವಿ ಜವಳಗಿ, ರಾಜು ಚಮಕೇರಿ, ಚನ್ನಪ್ಪ ಪಟ್ಟಣಶೆಟ್ಟಿ, ಈರಣ್ಣ ಹಲಗತ್ತಿ, ಬಸು ಢಪಾಳಾಪುರ, ಶಿವಲಿಂಗ ಟಿರ್ಕಿ, ಬಿ ಸಿ ಪೂಜಾರಿ, ಸಿದ್ದಗಿರೆಪ್ಪ ಕಾಗಿ, ಪ್ರಭು ಬೆಳಗಲಿ, ಭೀಮಶೆಪ್ಪ ಹೊಸೂರ, ಮಹಾಂತೇಶ ಹಡಪದ, ಜಿ. ಎಸ್.ಗೊಂಬಿ, ಪಾಪು ಓಸ್ವಾಲ, ಅಶೋಕ್ ಓಸ್ವಾಲ, ಶ್ರೀಶೈಲ್ ಕಿರಗಟಗಿ ಮುಂತಾದವರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 