ಸಾಮಾಜಿಕ ಪಿಡುಗುಗಳ ವಿರುದ್ಧ ಗರ್ಲ್ ಐಕಾನ್ ಪೌಂಡೇಶನ್ ಕೆಲಸ ಮಾಡುತ್ತಿದೆ: ಪೂಜಾ ಗಡಗಿ
Girl Icon Foundation is working against social evils: Pooja Gadgi
ಗದಗ:25: ರಾಜ್ಯದ 12 ಜಿಲ್ಲೆಗಳಲ್ಲಿ ನಮ್ಮ ಗರ್ಲ್ ಐಕಾನ್ ಪೌಂಡೇಶನ್ ಕೆಲಸ ಮಾಡುತ್ತಿದ್ದು, ಹುಬ್ಬಳ್ಳಿಯಲ್ಲಿ ಮುಖ್ಯ ಕಛೇರಿ ಇದೆ. ಸಾಮಾಜಿಕ ಪಿಡುಗುಗಳ ವಿರುದ್ಧ ನಮ್ಮ ಸಂಸ್ಥೆಯ ಕೆಲಸ. ಪ್ರತಿ ಹಳ್ಳಿಗಳಲ್ಲಿ ಈ ಕಾರ್ಯಕ್ರಮದ ಯೋಜನೆ ಬಗ್ಗೆ ಅರಿವು ಮೂಡಿಸುವುದು ಮುಖ್ಯ ಉದ್ದೇಶವಾಗಿದೆ. ಶಿಕ್ಷಣದಿಂದ ವಂಚಿತರಾದ ಹಾಗೂ ಶಿಕ್ಷಣ ಅಪೂರ್ಣ ಗೊಳಿಸಿದ ಯುವತಿಯರು ಬಾಲ್ಯ ವಿವಾಹ ಆಗಲು ಮುಖ್ಯ ಕಾರಣ ಅಂತ ಮಿಲಾನ ಪ್ರೊಗ್ರಾಂ ಕೋಆರ್ಡಿನೇಟರ್ ಪೂಜಾ ಗಡಗಿ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಮಿಲಾನ್ ಸಂಸ್ಥೆಯು ಕಳೆದ 7 ವರ್ಷಗಳಿಂದ 14 ರಿಂದ 18 ರ ವಯೋಮಿತಿಯ ಹುಡುಗಿಯರನ್ನು ಆಯ್ಕೆ ಮಾಡಿ ಅವರಿಗೆ ನಾಯಕತ್ವದ ತರಬೇತಿಯನ್ನು ನೀಡುತ್ತಿದೆ. ಹೀಗೆ ಆಯ್ಕೆಯಾದ ಬಾಲಕಿಯರನ್ನು ’ಗರ್ಲ್ ಐಕಾನ್’ ಎಂದು ಗುರುತಿಸಲಾಗುತ್ತದೆ.
ಈ ’ಗರ್ಲ್ ಐಕಾನ್’ಗಳ ಮೂಲಕ ಅವರದ್ದೇ ಸಮುದಾಯದ ಹೆಣ್ಣು ಮಕ್ಕಳ ಸಮಸ್ಯೆಗಳಿಗೆ ಅವರಿಂದಲೇ ಪರಿಹಾರಗಳನ್ನು ಕಂಡುಕೊಳ್ಳಲು ’ಮಿಲಾನ್ ಸಂಸ್ಥೆ’ ಶ್ರಮಿಸುತ್ತಿದೆ. ಪುತಿಯೊಬ್ಬ ’ಗರ್ಲ್ ಐಕಾನ್’ 20 ಜನ ಸಮಾನ ವಯಸ್ಕ ಬಾಲಕಿಯರ ಗುಂಪನ್ನು ಕಟ್ಟಿಕೊಂಡು ಸಮುದಾಯದಲ್ಲಿ ತೊಡಗಿಸಿಕೊಂಡು ತಾವು ಪಡೆದ ತರಬೇತಿಯನ್ನು ಇತರರಿಗೂ ತಲುಪಿಸುತ್ತಾರೆ. ಈ ಗುಂಪುಗಳ ಮೂಲ ಉದ್ದೇಶವು ಸಮಾಜದಲ್ಲಿ ಕಂಡು ಬರುವಂತಹ ಸಾಮಾಜಿಕ ಪಿಡುಗು ಗಳಾದ ಬಾಲ್ಯವಿವಾಹ, ಬಾಲ ಕಾರ್ಮಿಕತೆ, ಹೆಣ್ಣು ಭ್ರೂಣ ಹತ್ಯೆ, ಶಾಲೆ ಬಿಟ್ಟ ಮಕ್ಕಳನ್ನು ಶಾಲೆಗೆ ಸೇರಿಸುವುದು, ಜಾತಿಭೇದ, ವರದಕ್ಷಿಣೆ, ಮಕ್ಕಳ ಮೇಲಾಗುವ ದೌರ್ಜನ್ಯಗಳ ವಿರುದ್ಧ ಧ್ವನಿ ಎತ್ತುವುದಾಗಿದೆ. ಕರ್ನಾಟಕದಲ್ಲಿ ’ಮಿಲಾನ್ ಸಂಸ್ಥೆ’ಯು ಪ್ರಸ್ತುತ ಸುಮಾರು 1500 ಕ್ಕೂ ಹೆಚ್ಚು ಬಾಲಕಿಯರನ್ನು ’ಗರ್ಲ್ ಐಕಾನ್’ ಮತ್ತು ’ಗರ್ಲ್ ಐಕಾನ್ ಸ್ವಯಂ ಸೇವಕ’ರನ್ನು ಹೊಂದಿದೆ.
ಸಾಮಾಜಿಕ ಬದಲಾವಣೆ ತರುವ ನಿಟ್ಟಿನಲ್ಲಿ ಕಾಳಜಿ ವಹಿಸಿ ಕೆಲಸ ಮಾಡುತ್ತಿರುವ ’ಮಿಲಾನ್ ಸಂಸ್ಥೆ’ಯ ಉದ್ದೇಶಗಳನ್ನು ಇನ್ನಿತರ ಬಾಲಕಿಯರು ಹಾಗೂ ಪೋಷಕರು ಅರ್ಥ ಮಾಡಿಕೊಂಡು ಅದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು. ಪತ್ರಿಕಾ ಗೋಷ್ಠಿಯಲ್ಲಿ ಸಹಾಯಕ ಪ್ರೊಗ್ರಾಂ ಕೋಆರ್ಡಿನೇಟರ್ ರೂಪಾ ಮರಿಗೌಡ್ರ, ಎಂಇಎಲ್ ಕೋಆರ್ಡಿನೇಟರ್ ಸಿಮ್ರಿನ್ ಉದಗಟ್ಟಿ, ಪ್ರೊಜೆಕ್ಟ್ ಅಸಿಸ್ಟಂಟ್ ಪಾರ್ವತಿ ಬೆಳಗಲ, ಗರ್ಲ್ಸ ಐಕಾನ್ ಸಂಜನಾ ಭಜಂತ್ರಿ ಸೇರಿದಂತೆ ಇತರರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 