ವಾಲ್ಮೀಕಿ ಗುರುಪೀಠಕ್ಕೆ ಗದಗ ಜಿಲ್ಲಾ ಸವಿತಾ ಸಮಾಜದ ಭೇಟಿ: ಪರಮಪೂಜ್ಯರಿಗೆ ಗೌರವ ಸಮರೆ​‍್ಣ

ವಾಲ್ಮೀಕಿ ಗುರುಪೀಠಕ್ಕೆ ಗದಗ ಜಿಲ್ಲಾ ಸವಿತಾ ಸಮಾಜದ ಭೇಟಿ: ಪರಮಪೂಜ್ಯರಿಗೆ ಗೌರವ ಸಮರೆ​‍್ಣ Gadag District Savita Samaj visits Valmiki Guru Peetha: Tribute to His Holiness

ಗದಗ 29: ಜಿಲ್ಲಾ ಸವಿತಾ ಸಮಾಜದ ವತಿಯಿಂದ ಇಂದು ಹರಿಹರದ ರಾಜನಹಳ್ಳಿಯ ಶ್ರೀ ವಾಲ್ಮೀಕಿ ಗುರುಪೀಠದ ಸಂಸ್ಥಾನ ಮಠಕ್ಕೆ ಭೇಟಿ ನೀಡಿ, ಪರಮಪೂಜ್ಯ ಶ್ರೀ ಪ್ರಸನ್ನಾನಂದ ಪುರಿ ಮಹಾಸ್ವಾಮಿಗಳವರ ಆಶೀರ್ವಾದ ಪಡೆಯಲಾಯಿತು. ಈ ಸಂದರ್ಭದಲ್ಲಿ ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷರಾದ ಕೃಷ್ಣಾ ಎಚ್‌. ಹಡಪದ ಹಾಗೂ ಸಮಾಜದ ಹಿರಿಯರಾದ ಹನುಮಂತಪ್ಪ ರಾಂಪುರ. ದಾವಣಗೆರೆ ವೆಂಕಟೇಶ. ಶಿಲ್ಪ ಕಲಾವಿದರಾದ ಭದ್ರಾವತಿ ಜಯರಾಮ. ಮತ್ತು ವಿಶ್ವಾಸ್ ಅವರು ಪರಮಪೂಜ್ಯರಿಗೆ ಭಕ್ತಿಯ ಪೂರ್ವಕವಾಗಿ ಗೌರವ ಸಮರೆ​‍್ಣ ಮಾಡಿದರು. ಸಮಾಜದ ಅಭಿವೃದ್ಧಿ ಹಾಗೂ ಸಂಘಟನೆಯ ಕುರಿತು ಪೂಜ್ಯರೊಂದಿಗೆ ಚರ್ಚಿಸಿ, ಅವರ ಅಮೂಲ್ಯ ಮಾರ್ಗದರ್ಶನವನ್ನು ಪಡೆಯಲಾಯಿತು. ಈ ಭೇಟಿಯ ಸಮಯದಲ್ಲಿ ಸಮಾಜದ ಪ್ರಮುಖರು ಮತ್ತು ಭಕ್ತಾದಿಗಳು ಉಪಸ್ಥಿತರಿದ್ದರು.