ಕೊಪ್ಪಳ 29: ನಗರದ ಸರಕಾರಿ ಬಾಲಕರ ಪದವಿ ಪೂರ್ವಕಾಲೇಜನ ಸರ್ಕಾರಿ ಉರ್ದು ಪ್ರೌಢಶಾಲಾ ವಿಭಾಗದ 1980- 81ನೇ ಸಾಲಿನ ಹಳೆಯ ಉರ್ದು ಸಹಪಾಠಿ ವಿದ್ಯಾರ್ಥಿಗಳು ಸೇರಿ ಸುಮಾರು ನಲವತ್ತೈದು ವರ್ಷಗಳ ಬಳಿಕ ಕೊಪ್ಪಳದಲ್ಲಿ ಸ್ನೇಹ ಸಮ್ಮಿಲನ ಕಾರ್ಯಕ್ರಮ ಆಯೋಜನೆಗೆ ನಿರ್ಣಯಿಸಿದ್ದಾರೆ. ನಗರದಲ್ಲಿ ಬುಧವಾರ ಸಂಜೆ ಪೂರ್ವಭಾವಿ ಸಿದ್ದತಾ ಸಭೆ ನಡೆಸಿದ ಹಳೆಯ ಸಹಪಾಠಿಉರ್ದು ವಿದ್ಯಾರ್ಥಿಗಳು ಸೇರಿ ಸುದೀರ್ಘವಾಗಿ ಚರ್ಚಿಸಿ ಬರುವ ಜೂನ್ ಕೊನೆಯವಾರ ಅಥವಾ ಜುಲೈ ಮೊದಲನೇ ವಾರದಲ್ಲಿ ಎಲ್ಲರ ಅನುಕೂಲಕ್ಕೆ ತಕ್ಕಂತೆ ದಿನ ಮತ್ತು ದಿನಾಂಕ ಹಾಗೂ ಸ್ಥಳ ನಿಗದಿಪಡಿಸಿ ಸ್ನೇಹ ಸಮ್ಮಿಲನ ಕಾರ್ಯಕ್ರಮ ನಡೆಸಲಾಗುವುದು. ಸದರಿ ಕಾರ್ಯಕ್ರಮದಲ್ಲಿ ಎಲ್ಲರು ಅವರ ಕುಟುಂಬ ಪರಿವಾರ ಸಮೇತ ಪಾಲ್ಗೊಳ್ಳುವಂತೆ ವ್ಯವಸ್ತೆ ಮಾಡಲಾಗುವುದು.
ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಸಲು ಸಮಿತಿ ಉಪ ಸಮಿತಿಗಳ ರಚನೆ ಮಾಡಿ ಆಯಾ ಸಮಿತಿಗಳಿಗೆ ಜವಾಬ್ದಾರಿ ಹಂಚಿಕೆ ಮಾಡಿಕೊಡಲಾಗುವುದು. ಒಟ್ಟಾರೆ ಕಾರ್ಯಕ್ರಮ ಅರ್ಥಪೂರ್ಣವಾಗಿ ಆಚರಿಸಲು ಬುಧವಾರದಂದು ಕೊಪ್ಪಳದಲ್ಲಿ ಜರುಗಿದ ಪೂರ್ವ ಭಾವಿ ಸಿದ್ಧತಾ ಸಭೆಯಲ್ಲಿ ನಿರ್ಧಾರ ಪ್ರಕಟಿಸಲಾಯೀತು.
ಪೂರ್ವಭಾವಿ ಸಿದ್ಧತಾ ಸಭೆಯಅಧ್ಯಕ್ಷತೆಯನ್ನು ಸಯ್ಯದ್ಗೌಸ್ ಪಾಷಾ ಖಾಜಿ ವಹಿಸಿದ್ದರು, ಮಹಿಳಾ ಸಹಪಾಠಿ ಪರವಾಗಿ ಸಲ್ಮಾಜಹಾ ನೇತೃತ್ವ ವಹಿಸಿದ್ದರು. ಎಂ ಸಾಧಿಕ್ ಅಲಿ ಸಭೆಯ ಕಾರ್ಯಕಲಾಪ ನಡೆಸಿ ಕೊಟ್ಟರು, ಸದರಿ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಕೊಪ್ಪಳದ ಹಳೆಯ ಉರ್ದು ವಿದ್ಯಾರ್ಥಿ ಸಹಪಾಠಿಗಳಾದ ಸಲೀಮುದ್ದೀನ್, ಶಮೀಮುನ್ನಿಸಾ ಬೇಗ ಖಿಲ್ಲೇದಾರ್ ರುಕ್ಸಾನಾ ಮನಿಯಾರ್ ಬದರ್ ಸುಲ್ತಾನ ಜೀನತ್ ಬೇಗಮ್ ಮತ್ತಿತರರು ಪಾಲ್ಗೊಂಡಿದ್ದರು.