ಲಕ್ಷ್ಮೇಶ್ವರದಲ್ಲಿ ಲಮಾಣಿ ಅಭಿಮಾನಿಗಳಿಂದ ಉಚಿತ ಬೇಸಿಗೆ ಶಿಬಿರ

ಲಕ್ಷ್ಮೇಶ್ವರದಲ್ಲಿ ಲಮಾಣಿ ಅಭಿಮಾನಿಗಳಿಂದ ಉಚಿತ ಬೇಸಿಗೆ ಶಿಬಿರ  Free summer camp organized by Lamani fans in Lakshmeshwaram

   ಲಕ್ಷ್ಮೇಶ್ವರ 05 : ಉಮಾ ವಿದ್ಯಾಲಯ ಪ್ರೌಢಶಾಲೆ ಲಕ್ಷ್ಮೇಶ್ವರದಲ್ಲಿ ಡಾ. ಚಂದ್ರು ಲಮಾಣಿ ಅಭಿಮಾನಿ ಬಳಗದಿಂದ ಉಚಿತ ಬೇಸಿಗೆ ಶಿಬಿರ ನಡೆಯುತ್ತಿದ್ದು ಮಂಗಳವಾರ 5ರಂದು ಬೆಳಿಗ್ಗೆ 10 ಗಂಟೆಗೆ ಡಾ. ಚಂದ್ರು ಲಮಾಣಿ ಜನಪ್ರಿಯ ಶಾಸಕರು ಶಿರಹಟ್ಟಿ ಇವರು ಕ್ಲಾಸಿಗೆ ಬಂದು ಜೀವನ ಕ್ರಿಯೆ ಎಂಬ ಪಾಠದಲ್ಲಿ ಬರುವ ಅಂಶಗಳು ಸ್ನಾಯುವಿನಿಂದಾದ ಒಂದು ಅಂಗವಾಗಿದ್ದು ಹೃದಯ ಆಕ್ಸಿಜನ್ ಕಾರ್ಬನ್ ಡೈಆಕ್ಸೈಡ್ ಶ್ವಾಸಕೋಶ ಕವಾಟಗಳ ಅಪಧಮನಿ ಅಭಿಧಮನಿ ರಕ್ತ ನಾಳಗಳ ಹೃತ್ಕಕ್ಷಿ ಕೆಂಪು ರಕ್ತ ಬಿಳಿ ರಕ್ತದ ಕಣಗಳು ಕೊರತೆಯಾದರೆ ಹೇಗೆ ಅನಾರೋಗ್ಯ ಉಂಟಾಗುತ್ತದೆ.

ಎಂಬುದನ್ನು ಮತ್ತು ಅವುಗಳ ಕಾರ್ಯಕ್ಷೇಮತೆ ಬ್ಲಡ್ ಪ್ರೆಷರ್ ಹೇಗೆ ಉಂಟಾಗುತ್ತದೆ ಅವುಗಳನ್ನು ಹೇಗೆ ಮಾಪನ ಮಾಡುತ್ತಾರೆ ಅದಕ್ಕೆ ಪರಿಹಾರ ಏನು ಎಂಬುವುದನ್ನು ಸಹ ವಿಸ್ತಾರವಾಗಿ ಹೇಳಿದರು. ಅಲ್ಲದೆ ವಿದ್ಯಾರ್ಥಿಗಳಿಗೆ ಹೇಗೆ ಓದಬೇಕು ಬರೆಯಬೇಕು ಕಠಿಣವಾದ ಪ್ರಶ್ನೆಗಳಿಗೆ ಹೇಗೆ ಉತ್ತರವನ್ನು ತಯಾರಿ ಮಾಡಿಕೊಳ್ಳಬೇಕು. ಎಂಬುದನ್ನು ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ಹೇಳಿದರು. ಮಾನ್ಯ ಶಾಸಕರು ಬೆಳಿಗ್ಗೆ 10 ರಿಂದ 11:30ವರೆಗೆ ಪಾಠ ಬೋಧನೆಯನ್ನು ಮಾಡಿದರು. ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಚ್ ನಾಣಕಿ ನಾಯಕ. ಮಂಜುನಾಥ ಸಂಗನಪೇಟ ಶಿಬಿರದ ವ್ಯವಸ್ಥಾಪಕರಾದ ಕೆ ಆರ್ ಲಮಾಣಿ ನಾಗರಾಜ್ ಶರಣಾರ್ಥಿ ಮಹಾಂತೇಶ್ ಕಳ್ಳಳ್ಳಿ ಮುಂತಾದವರು ಇದ್ದರು.