ಉಚಿತ ಆರೋಗ್ಯ ಶಿಬಿರ ಬಡವರಿಗೆ ವರದಾನ
Free health camp a boon for the poor
ಹೂವಿನಹಡಗಲಿ 02: ಆರೋಗ್ಯ ಶಿಬಿರಗಳು ಬಡವರ ಪಾಲಿಗೆ ವರದಾನವಾಗಿವೆ ಎಂದು ಗವಿಮಠದ ಡಾ.ಹಿರಿಶಾಂತವೀರಸ್ವಾಮಿ ಹೇಳಿದರು.ಇಲ್ಲಿನ ಗವಿಮಠದ ಶಾಂತವೀರ ಸಮುದಾಯ ಭವನದಲ್ಲಿ ಭಾನುವಾರ ಉಚಿತ ಆರೋಗ್ಯ ಶಿಬಿರದಲ್ಲಿ ಸಾನಿದ್ಯ ವಹಿಸಿ ಮಾತನಾಡಿದರು. ಆರ್ಥಿಕವಾಗಿ ಹಿಂದುಳಿದ ಜನರಿಗೆ ಉಚಿತ ವೈದ್ಯಕೀಯ ತಪಾಸಣೆ, ಓಷಧೋಪಚಾರ, ಆರೋಗ್ಯ ಅರಿವು ದೊರೆಯುತ್ತದೆ.ಸಮಾಜದ ಸಮಗ್ರ ಆರೋಗ್ಯ ಸುಧಾರಣೆಗೆ ಆರೋಗ್ಯ ಶಿಬಿರಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದರು. ಶ್ರೀಮತಿ ಶಕುಂತಲಮ್ಮ ಯಂಕೋಬ ಶ್ರೇಷ್ಠಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ನಾರಾಯಣ ಹೆಲ್ತ್, ಶಂಕರ, ಕಣ್ಣಿನ ಆಸ್ಪತ್ರೆ, ಫೆಡರೇಶನ್ ಭಾರತೀಯ ವ್ಯೆದ್ಯಕೀಯ ಸಂಘ,ಇಲ್ಲಿನ ಎಸ್ಎಂಎನ್ ಫೌಂಡೇಶನ್, ಎಸ್.ಎಸ್. ನಾರಾಯಣ ಹೆಲ್ತ್ ಕೇರ್ ದಾವಣಗೆರೆ, ಶ್ರೀ ಕಂಚಿ ಕಾಮಕೋಟಿ ಮೆಡಿಕಲ್ ಟ್ರಸ್ಟ್ ಶಂಕರ ಕಣ್ಣಿನ ಆಸ್ಪತ್ರೆ ಶಿವಮೊಗ್ಗ, ಎಸ್.ಎಸ್. ಕೇರ್ ಟ್ರಸ್ಟ್ (ಬಾಪೂಜಿ ದಂತ ಚಿಕಿತ್ಸಾ ಕೇಂದ್ರ) ದಾವಣಗೆರೆ, ತಾಲೂಕ ವೈದ್ಯಾಧಿಕಾರಿಗಳ ಕಚೇರಿ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರದ ಜರುಗಿತು.ವೈದ್ಯರಾದ ಧರ್ಮಣ್ಣ, ರಾಮಣ್ಣ ಶ್ರೇಷ್ಠಿ, ವೀರೇಶ ಹೆಚ್ ಎಂ, ಆನಂದ, ಪ್ರಕಾಶ ಅಟವಾಳಗಿ, ಸೋಮಶೇಖರ್, ಉಮೇಶ್ ಜೆ.ಡಿ,ರಾಕೇಶ್ ತಿಲಕ್, ಶುಶಾಂತ್ ಮತ್ತು ಎಸ್ ಎಂ ಎನ್ ಶಿವರಾಜ,ಅಮರೇಶ ಶ್ರೇಷ್ಠಿ, ಎಸ್ ಎಂ ಎನ್ ಅಶೋಕ, ರವೀಂದ್ರ ಶ್ರೇಷ್ಠಿ ಇದ್ದರು.ಶಿಬಿರದಲ್ಲಿ 600 ಕ್ಕೂ ಹೆಚ್ಚು ಜನರು ಆರೋಗ್ಯದ ಶಿಬಿರದ ಪ್ರಯೋಜನ ಪಡೆದರು.ಶಿಕ್ಷಕರಾದ ವಿಶ್ವನಾಥ, ಹೆಚ್ ಬಿ ರಾಜಣ್ಣ ಕಾರ್ಯಕ್ರಮವನ್ನು ನಿರೂಪಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 