ಹಿರಿಯ ನಾಗರಿಕರಿಗೆ ಉಚಿತ ಅಂಬ್ಯುಲೆನ್ಸ ಸೇವೆ
Free ambulance service for senior citizens
ಲೋಕದರ್ಶನ ವರದಿ
ಬೆಳಗಾವಿ 28: ನಗರದ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ವತಿಯಿಂದ ಆಸ್ಪತ್ರೆಯ ಸುತ್ತಮುತ್ತಲಿನ 5ಕಿ ಮೀ ವ್ಯಾಪ್ತಿಯಲ್ಲಿ ಬರುವ ಅನಗೋಳ, ವಡಗಾವಿ, ಶಹಾಪೂರ, ಮಹದ್ವಾರ ರೋಡ, ಗೂಡಶೆಡ ರೋಡ, ಟಿಳಕವಾಡಿ ಯಳ್ಳೂರ, ಉದ್ಯಮಬಾಗ, ಮಜಗಾವ, ಹಳೆ ಬೆಳಗಾವಿ ಮುಂತಾದ ಪ್ರದೇಶಗಳ ವ್ಯಾಪ್ತಿಯಲ್ಲಿ ಬರುವ ಹಿರಿಯ ನಾಗರಿಕರಿಗೆ ಉಚಿತ ಅಂಬ್ಯುಲೆನ್ಸ ಸೇವೆಯನ್ನು ನೀಡಲಾಗುತ್ತಿದೆ. ತುರ್ತು ಸಂದರ್ಭಗಳಲ್ಲಿ ದಿನದ 24 ಘಂಟೆಯೂ ಆಸ್ಪತ್ರೆಗೆ ಭೇಟಿ ನೀಡಲು ಹಿರಿಯ ನಾಗರಿಕರಿಗೆ ಅನುಕೂಲವಾಗಲೆಂದು ಈ ಸೇವೆಯನ್ನು ಪ್ರಾರಂಭಿಸಲಾಗಿದೆ.
ಹಿರಿಯ ನಾಗರಿಕರು ಆಸ್ಪತ್ರೆಗಳಲ್ಲಿ ಸರದಿಯಲ್ಲ್ಲಿ ನಿಂತು ತಮ್ಮ ನೋಂದಣಿ ವೈದ್ಯರೊಂದಿಗೆ ಸಂದರ್ಶನ, ರಕ್ತ ಮೂತ್ರ ಪರಿಕ್ಷೆ, ಕ್ಷ ಕಿರಣ ಓಷಧಾಲಯ ಮುಂತಾದೆಡೆ ಸರದಿಯಲ್ಲಿ ನಿಲ್ಲುವ ಬವಣೆಯನ್ನು ತಪ್ಪಿಸಲು, ಈ ಸೇವೆಯನ್ನು ಪ್ರಾರಂಭಿಸಲಾಗಿದೆ. ವಿಶೇಷವೆಂಬಂತೆ ಆರೋಗ್ಯ ದಾಸೋಹ ಕಾರ್ಡುಗಳನ್ನು ಉಚಿತವಾಗಿ ನೀಡಲಾಗುವದು. ಈ ಕಾರ್ಡಗಳ ನೋಂದಣಿ ಮಾಡಿಕೊಂಡ ನಾಗರಿಕರಿಗೆ ಉಚಿತ ನೋಂದಣಿ, ಉಚಿತವಾಗಿ ವೈದ್ಯರ ಸಂದರ್ಶನ, ರಕ್ತ ಮೂತ್ರ ಪರಿಕ್ಷೆ, ಕ್ಷ ಕಿರಣ ಓಷಧಾಲಯಗಳ ಮೇಲೆ ಶೇಕಡಾ 20 ರಷ್ಟು ರಿಯಾಯತಿ ಹಾಗೂ ಒಳರೋಗಿವಿಬಾಗದಲ್ಲಿ ದಾಖಲಾಗುವ ರೋಗಿಗಳಿಗೆ ಶೇಕಡಾ 10ರಷ್ಟು ರಿಯಾಯತಿ ನೀಡಲಾಗುವದು. ಈ ಕಾರ್ಡ ನೋಂದಣಿ ಮಾಡಿಕೊಳ್ಳಲು ಮೊಬೈಲ ಸಂಖ್ಯೆ, ಇ-ಮೇಲ್ ವಿಳಾಸಗಳು ಕಡ್ಡಾಯವಾಗಿದೆ.
ಆದ್ದರಿಂದ ಮೇಲ್ಕಾಣಿಸಿದ ಪ್ರದೇಶಗಳಲ್ಲಿ ವಾಶಿಸುವ ಹಿರಿಯ ನಾಗರಿಕರುಗಳು ಈ ಸಂದರ್ಭದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಹನಾಧಿಕಾರಿಗಳಾದ ಪ್ರಶಾಂತ ದೇಸಾಯಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅಧಿಕ ಮಾಹಿತಿಗಾಗಿ 0831-2413777 ್ಖ1101, 8550887777, 9071413821 ಮೊಬೈಲ ಸಂಖ್ಯೆಗಳ ಮೇಲೆ ಸಂಪರ್ಕಿಸಲು ಸೂಚಿಸಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 