ಮಹಾ ಕಂಭಮೇಳಕ್ಕೆ ಹೊರಟಿದ್ದ ಬೆಳಗಾವಿಯ ನಾಲ್ವರು ಅಪಘಾತದಲ್ಲಿ ಸಾವು

Four people from Belgaum who were going to Maha Kambha Mela died in an accident

ಬೆಳಗಾವಿ 07: ಮಹಾ ಕಂಭಮೇಳಕ್ಕೆ ಹೊರಟಿದ್ದ ಬೆಳಗಾವಿಯ ನಾಲ್ವರು ಸೇರಿ ಆರು ಜನ ದುರ್ಮರಣಕ್ಕೀಡಾದ ಘಟನೆ  ಶುಕ್ರವಾರ ಬೆಳಗಿನ ಜಾವ ಮಧ್ಯಪ್ರದೇಶದ ಇಂದೋರ್ ಸಮೀಪದ ಮಾಣಪುರ‌ ಬಳಿ ಸಂಭವಿಸಿದೆ.

ಮಧ್ಯಪ್ರದೇಶದ ಇಂದೂರು ಬಳಿ ರಸ್ತೆ ಅಪಘಾತದಲ್ಲಿ ಬೆಳಗಾವಿಯ ಗಣೇಶಪುರದ ನಾಲ್ವರು ನಿವಾಸಿಗಳು ಸಾಗರ ಮತ್ತು ನೀತಾ  ಮೃತಪಟ್ಟಿದ್ದು, ಇನ್ನುಳಿದ ನಾಲ್ವರ ಹೆಸರು ಇನ್ನೂ ಖಚಿತ ಪಟ್ಟಿಲ್ಲ. ಇವರಲ್ಲಿ ಇಬ್ಬರು ಇಂದೋರ್ ನಿವಾಸಿಗಳು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಬೆಳಗಾವಿಯ ನಾಲ್ವರು ಸೇರಿ ದ್ವಿಚಕ್ರ ವಾಹನದಲಿದ್ದ ಇಂದೋರ್ ನಿವಾಸಿಗಳು ಮೃತಪಟ್ಟಿರುವ ಬಗ್ಗೆ ತಿಳಿದು ಬಂದಿದೆ.

ಉತ್ತರ ಪ್ರದೇಶದ ಪ್ರಯಾಗರಾಜ್ ನ ಮಹಾ ಕುಂಭಮೇಳದ ಕಾಲ್ತುಳಿತದಲ್ಲಿ ಬೆಳಗಾವಿಯ ನಾಲ್ವರು ಮೃತಪಟ್ಟ ಸುದ್ದಿ ಮಾಸುವ ಮುನ್ನವೇ ಈ ಘಟನೆ ಸಂಭವಿದೆ.