ಶಿಲಾನ್ಯಾಸ ಕಾರ್ಯಕ್ರಮ

 ಶಿಲಾನ್ಯಾಸ ಕಾರ್ಯಕ್ರಮ Foundation laying programme

ಲೋಕದರ್ಶನ ವರದಿ 

ಶಿಲಾನ್ಯಾಸ ಕಾರ್ಯಕ್ರಮ 

ಕಾರವಾರ, ಅ.13: ವಿಧಾನ ಸಭಾ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದಡಿ ಕಾರವಾರ ತಾಲೂಕಿನ ಕಡವಾಡ ಗ್ರಾಮದ ಜನತಾ ವಿದ್ಯಾಲಯ ಶಾಲೆಯ ರಂಗ ಮಂದಿರ ಹಾಗೂ ಎರಡು ಕೊಠಡಿಗಳ ನಿರ್ಮಾಣ ಕಾಮಗಾರಿಗಳಿಗೆ ಕಡವಾಡ ಗ್ರಾಮ ಪಂಚಾಯಿತಿ ಅಧ್ಯಕ್ಷ ಆನಂದು ರಾಮ ನಾಯ್ಕ ಇತ್ತೀಚೆಗೆ ಶಿಲಾನ್ಯಾಸ ನೆರೆವರಿಸಿದರು. 

ಈ ಸಂದರ್ಭದಲ್ಲಿ ನಿವೃತ್ತ ಪ್ರಾಂಶುಪಾಲ ಜಿ.ಪಿ ನಾಯಕ, ಗ್ರಾಮ ಪಂಚಾಯಿತಿ ಸದಸ್ಯ ಕಿಶೋರ್ ಕಡವಾಡಕರ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಆಂಜಿನೇಯ ವಡ್ಡರ, ಗ್ರಾ.ಪಂ ಮಾಜಿ ಅಧ್ಯಕ್ಷ ಮಾರುತಿ ಆರ್ ನಾಯ್ಕ, ಪಿಡಿಓ ಪ್ರಭಾವತಿ ಬಂಟ್, ತಾಲೂಕು ಗ್ಯಾರಂಟಿ ಯೋಜನೆ ಸಮಿತಿ ಸದಸ್ಯ ಶಶಾಂಕ ಕಡವಾಡಕರ ಶಾಲಾ ಮುಖೋಧ್ಯಾಪಕರು, ಸಹ ಶಿಕ್ಷಕರು, ವಿದ್ಯಾರ್ಥಿಗಳು, ಊರ ನಾಗರೀಕರು ಮತ್ತಿತರರು ಉಪಸ್ಥಿತರಿದ್ದರು.