ಜನಪದ ಸಾಹಿತ್ಯ ಜನರ ಜೀವ, ಭಾವಗಳ ಸಂಗಮ
ಲೋಕದರ್ಶನವರದಿ
ಮಹಾಲಿಂಗಪುರ13: ಹಳ್ಳಿ ಸೊಗಡಿನ ಜನರ ಜೀವ, ಭಾವಗಳ ಸಂಗಮವಾಗಿದ್ದ ಜನಪದ ಸಾಹಿತ್ಯ ಮರೆಯಾಗುತ್ತಿರುವುದು ಚವಿಷಾದಕರ ಸಂಗತಿ ಎಂದು ಮಹಾಲಿಂಗಪುರ ವಲಯ ಕಜಾಪ ಅಧ್ಯಕ್ಷ ಬಸವರಾಜ ಮೇಟಿ ಹೇಳಿದರು.
ಸ್ಥಳೀಯ ಕೆಎಲ್ಇ ಸಂಸ್ಥೆಯ ಎಸ್ಸಿಪಿ ಪ್ರೌಢಶಾಲೆಯಲ್ಲಿ 2019-20ನೇ ಸಾಲಿನ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ವಿದ್ಯಾಥರ್ಿಗಳು ಜನಪದ ಸಾಹಿತ್ಯ ಓದಿ, ಕೇಳಿ ಉತ್ತಮ ಸೃಜನಶೀಲತೆ ಬೆಳೆಸಿಕೊಂಡು ಬದುಕಿನ ಸಾರ್ಥಕತೆಯನ್ನು ಅರಿಯಬೇಕು ಎಂದರು. ಜಾನಪದ ಗೀತೆ, ಗೀಗಿ ಪದ ಹಾಗೂ ಒಗಟುಗಳನ್ನು ಹೇಳುವ ಮೂಲಕ ಮಕ್ಕಳನ್ನು ರಂಜಿಸಿದರು. ಚಿತ್ರಕಲಾ ಶಿಕ್ಷಕ ಎಂ.ಐ,ಡಾಂಗೆ ಮಾತನಾಡಿ ಲಲಿತ ಕಲೆಗಳತ್ತ ಆಸಕ್ತಿ ತೋರುವ ಮೂಲಕ ವಿದ್ಯಾಥರ್ಿಗಳು ಸಾಧಕರಾಗಬೇಕು ಎಂದರು.
ಸ್ಥಳೀಯ ಆಡಳಿತ ಮಂಡಳಿ ಸದಸ್ಯರಾದ ಅಶೋಕ ಅಂಗಡಿ, ಸಂತೋಷ ಹುದ್ದಾರ ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. 2019-20ನೇ ಸಾಲಿನ ಶಾಲಾ ಸಂಸತ್ತಿನ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು. ವಿದ್ಯಾಥರ್ಿ ಪ್ರತಿನಿಧಿಗಳಾದ ಸಾಗರ ಭಜಂತ್ರಿ ಮತ್ತು ವಿದ್ಯಾ ಮೂಡಲಗಿ ಅವರನ್ನು ಸನ್ಮಾನಿಸಲಾಯಿತು.
ಉಪಪ್ರಾಂಶುಪಾಲ ಆರ್.ಎ.ಸೂರ್ಯವಂಶಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಿಕ್ಷಕ ಎಸ್.ಜಿ.ಜೀವನಿ ಸ್ವಾಗತಿಸಿದರು. ಆರ್.ಎಸ್.ಯರಗಾನಿ ನಿರೂಪಿಸಿದರು. ಎಸ್.ಆರ್. ಅಡ್ಲಿಮಠ ವಂದಿಸಿದರು. ಹಿರಿಯ ಶಿಕ್ಷಕರಾದ ಬಿ.ಡಿ ಗೋಕಾಕ, ಬಿ.ಎನ್.ಅರಕೇರಿ, ಡಿ.ಎ. ಬಿಸನಾಳ, ಸಿ.ಎಸ್.ಕೊಣ್ಣೂರ, ಎಸ್.ಎಸ್.ಅನಿಗೋಳ, ಕೆ.ಬಿ.ಬಡ್ಡೂರ, ಎಂ.ಎಲ್.ರಮೇಶಬಾಬು, ಪಿ.ಎಂ.ಪಡೇಸೂರ, ಪಿ.ಎಸ್.ಕುಡತೆ ಇದ್ದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 