ಜಾನಪದ ಕಲೆ ಗ್ರಾಮೀಣ ಭಾಗದ ಜನರ ಜೀವನಾಡಿ
Folk art is the lifeblood of rural people
ಹೂವಿನಹಡಗಲಿ 06: ಜಾನಪದ ಕಲೆ ನಮ್ಮ ನಾಡಿನ ಗ್ರಾಮೀಣ ಭಾಗದ ಜನರ ಜೀವನಾಡಿ ಎಂದು ವಿಕೆಕೆ ಕಾಲೇಜಿನ ಪ್ರಾಚಾರ್ಯರಾದ ಮೈಲಾರ ರೇವಣಸಿದ್ದಪ್ಪ ಮಾಗಳ ಅಭಿಪ್ರಾಯ ಪಟ್ಟರು.
ತಾಲೂಕಿನ ಹಿರೇಹಡಗಲಿ ವಿಕೆಕೆ ಶಾಲೆಯಲ್ಲಿ ಕರ್ನಾಟಕ ಜಾನಪದ ಪರಿಷತ್ತು ವಿಜಯನಗರ ಜಿಲ್ಲೆ ಹಾಗೂ ಚಂದ್ರಶೇಖರ ಕಲಾಬಳಗ ಅಂಗೂರ್ ಇವರ ಸಹಯೋಗದೊಂದಿಗೆ ಆಯೋಜಿಸಿದ ಜಾನಪದ ಸಂಭ್ರಮ ಹಾಗೂ ಜಾನಪದ ಕಲೆಗಳ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಮಾತನಾಡಿದರು. ಉದ್ಘಾಟನೆಯನ್ನು ಸದ್ಗುರು ಅಭಿಷೇಕ ಹಾಲಸ್ವಾಮಿಗಳು ನೆರವೇರಿಸಿದರು ಪ್ರಾಸ್ತಾವಿಕವಾಗಿ ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಕೆ ಸಿ ಪರಶುರಾಮ್ ಅಂಗೂರ್ ಮಾತನಾಡಿದರು. ಅದ್ಯಕ್ಷತೆ ಹಿರಿಯ ಸಂಗೀತ ಶಿಕ್ಷಕ ಎ ಉಮಾಪತಿ ವಹಿಸಿದ್ದರು.
ಜಾನಪದ ಕಲೆಗಳ ವಿಚಾರ ಸಂಕಿರಣದಲ್ಲಿ ಆಧುನಿಕ ಯುಗದಲ್ಲಿ ಜಾನಪದ ಸಾಹಿತ್ಯ ಎಂಬ ವಿಷಯ ಕುರಿತು ಉಪನ್ಯಾಸವನ್ನು ಶಿಕ್ಷಕ ಸಿಎನ್ ಸೋಮೇಶಪ್ಪ ನಡೆಸಿಕೊಟ್ಟರು. ಹಂತಿ ಪದಗಳು ಬಿ ಬಾಸು ಸಾಹೇಬ್ ಜಾನಪದ ಗೀತೆಗಳು ಕೆ ಅಶೋಕ್ ಕಟ್ಟಿಮನಿ ಗಂಗಪ್ಪ ಕುಮಾರಿ ಚಂದ್ರಮ್ಮ ನಡೆಸಿಕೊಟ್ಟರು ಆರಂಭದಲ್ಲಿ ಶಿಕ್ಷಕ ಕರಿಯಪ್ಪ ಸ್ವಾಗತಿಸಿ ನಿರೂಪಿಸಿದರು ಕೊನೆಯಲ್ಲಿ ಗೀತಾ ವಂದಿಸಿದರು
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 