ಕರ್ತವ್ಯಕ್ಕೆ ಅಡ್ಡಿಪಡಿಸಿದ ಉಪಾಧ್ಯಕ್ಷೆ ಪತಿಯ ಮೇಲೆ ದೂರು ದಾಖಲು

ದೇವರಹಿಪ್ಪರಗಿ 19: ತಾಲೂಕಿನ ಕೆರೂಟಗಿ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಾದ ಅಕ್ಕಮಹಾದೇವಿ ಅಂಗಡಿ ಅವರು ಗ್ರಾಪಂ ಸಭಾಭವನದಲ್ಲಿ ಕರ್ತವ್ಯ ನಿರತ ಅಧಿಕಾರಿಗಳು ಹಾಗೂ ಆಡಿಟ್ ಮಾಡಲು ಬಂದ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡ ಪಡಿಸಿದ್ದು,ಸಿಬ್ಬಂದಿಗಳ ಮೇಲೆ ಅವಾಚ್ಯ ಶಬ್ದಗಳಿಂದ ನಿಂದನೆ ಹಾಗೂ ಕಂಪ್ಯೂಟರ್ ಸಲಕರಣೆಗಳನ್ನು  ಹಾನಿ ಮಾಡಿದ್ದಾರೆ ಎಂದು ಉಪಾಧ್ಯಕ್ಷೆ ಪತಿಯಾದ ರಾಜಶೇಖರ ಶಂಕ್ರ​‍್ಪ ಸಂದಿಮನಿ ಇವರ ಮೇಲೆ ದೂರು ದಾಖಲಿಸಿದ್ದಾರೆ.ಹಿನ್ನಲೆ. ದಿ.13.09.2024 ರಂದು ಗ್ರಾಪಂಯ ಮಹಿಳಾ ಸಿಬ್ಬಂದಿಗೆ ಥಳಿತ, ಜೀವ ಬೆದರಿಕೆಯ ವಿಡಿಯೋ ವೈರಲ್ ಆದ ಕಾರಣ ದಿ.19.09.2024 ರಂದು ಕಲಕೇರಿ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ.ಸ್ಥಳಕ್ಕೆ ಕಲಕೇರಿ ಪೋಲಿಸ್ ಠಾಣೆ ಪಿಎಸ್‌ಐ ಭೇಟಿ ನೀಡಿ ಪರೀಶೀಲನೆ ನಡೆಸಿದ್ದಾರೆ.