ಕ್ಷೇತ್ರ ಸಮನ್ವಯಾಧಿಕಾರಿ ದಮ್ಮೂರಮಠಗೆ ಸನ್ಮಾನ
Field Coordinator Dammoor Math honored
ತಾಳಿಕೋಟೆ 07: ತಾಲೂಕಿನ ಪೀರಾಪೂರ ಸರಕಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕರಾಗಿದ್ದ ಆರಿ್ಬ. ದಮ್ಮೂರಮಠ ಅವರು ಮುದ್ದೇಬಿಹಾಳ ಕ್ಷೇತ್ರ ಸಮನ್ವಯಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಹಿನ್ನೆಲೆಯಲ್ಲಿ ತಾಳಿಕೋಟೆಯಲ್ಲಿ ಆರ್ಯಭಟ ಅಕಾಡೆಮಿ ವತಿಯಿಂದ ಅವರನ್ನು ದಂಪತಿ ಸಹಿತ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್.ಎಸ್.ಶಿಕ್ಷಣಸಂಸ್ಥೆಯ ಅಧ್ಯಕ್ಷ ಎಚ್.ಎಸ್.ಪಾಟೀಲ ಅವರು ಮಾತನಾಡಿ ದಮ್ಮೂರಮಠ ಅವರು ಪರಿಶ್ರಮಿ, ಸ್ನೇಹಜೀವಿ, ಬದುಕಿನ ಹಲವು ಮಜಲುಗಳಲ್ಲಿ ಸಿಹಿಕಹಿಯನ್ನುಂಡರೂ ಎಲ್ಲವನ್ನೂ ಸಮವಾಗಿ ಸ್ವೀಕರಿಸಿದವರು.ಕರುಣೆ, ಪರೋಪಕಾರ, ತಾಳ್ಮೆ, ನಗು ಅವರ ಬಲವಾಗಿದ್ದು ಶಿಕ್ಷಣ ಇಲಾಖೆ, ಶಾಲೆ ಹಾಗೂ ಶಿಕ್ಷಕರುಗಳ ಮಧ್ಯೆ ಸಂವಹನ ಸಾಧಿಸಿ ಉತ್ತಮ ಆಡಳಿತ ನೀಡುವ ಸಮರ್ಥರು ಅವರಾಗಿದ್ದಾರೆ. ಅವರಿಗೆ ಈಗಾಗಲೆ ಆಡಳಿತದ ಅನುಭವವಿದೆ. ಕುಗ್ರಾಮ ಪೀರಾಪುರ ಗ್ರಾಮದಲ್ಲಿನ ಸರ್ಕಾರಿ ಪ್ರೌಢಶಾಲೆಯನ್ನು ಒಂದು ಅತ್ಯುತ್ತಮ ಪ್ರೌಢಶಾಲೆನ್ನಾಗಿಸಿ ಸಾವಿರಾರು ಮಕ್ಕಳ ಬಾಳಲ್ಲಿ ದೀಪ ಬೆಳಗಿಸಿದವರು ಈಗ ಕ್ಷೇತ್ರ ಸಮನ್ವಯಾಧಿಕಾರಿಯಾಗಿ ಬಂದಿರುವುದು ಭಾಗ್ಯವೇ ಸರಿ ಎಂದರು.ಸನ್ಮಾನಿತರಾದ ಕ್ಷೇತ್ರ ಸಮನ್ವಯಾಧಿಕಾರಿ ಆರಿ್ಬ.ದಮ್ಮೂರಮಠ ಗೌರವ ಸನ್ಮಾನ ನೀಡಿದುದಕ್ಕೆ ಕೃತಜ್ಞತೆ ಅರ್ಿಸಿದರು.
ಶಿಕ್ಷಕ ಗುಂಡುರಾವ್ ಧನಪಾಲ, ಹುಣಶ್ಯಾಳ ಸರ್ಕಾರಿ ಉರ್ದು ಪ್ರೌಢಶಾಲೆಯ ಮುಖ್ಯಶಿಕ್ಷಕ ಎಸ್.ಎಸ್.ಗಡೇದ, ಉಪಪ್ರಾಂಶುಪಾಲ ಜಗದೀಶ ಕಟ್ಟಿಮನಿ, ನಿವೃತ್ತ ಉಪಪ್ರಾಂಶುಪಾಲ ಎಸ್.ಡಿ.ಕರ್ಜಗಿ ಮಾತನಾಡಿದರು.ವೇದಿಕೆಯಲ್ಲಿ ಅಕಾಡೆಮಿ ಅಧ್ಯಕ್ಷ ಅಲ್ಲಾಭಕ್ಷ ಇನಾಮದಾರ, ವಿಕಾಸ ಪಬ್ಲಿಕದ ಸ್ಕೂಲ್ ನ ಅಧ್ಯಕ್ಷ ರಾಮನಗೌಡ ಬಾಗೇವಾಡಿ, ಸರ್ವಜ್ಞ ವಿದ್ಯಾಪೀಠ ಪ್ರಾಥಮಿ ಪ್ರೌಢ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮ ಶಾಲೆಯ ಅಧ್ಯಕ್ಷಸಿದ್ಧನಗೌಡ ಮಂಗಳೂರ, ಬ್ರಿಲಿಯಂಟ ಶಿಕ್ಷಣಸಂಸ್ಥೆ ಮೈಲೇಶ್ವರ ಎಂ.ಬಿ.ಮಡಿವಾಳರ ಉಪಸ್ಥಿತರಿದ್ದರು. ಎಸ್.ಎಂ.ಪಾಟೀಲ ನಿರ್ವಹಿಸಿದರು. ಆರ್.ಎಸ್.ಬೂದಿಹಾಳ ಸ್ವಾಗತಿಸಿದರು. ಎಂ.ಎ.ಬಾಗೇವಾಡಿ ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 