ರಾಜಣ್ಣ ಮಲ್ಲಾಡದ ಅವರಿಗೆ ಸನ್ಮಾನ

ರಾಜಣ್ಣ ಮಲ್ಲಾಡದ ಅವರಿಗೆ ಸನ್ಮಾನ  Felicitation to Rajanna Mallad

ಗದಗ 20:  ನಗರದ ಲಯನ್ಸ್‌ ಕ್ಲಬ್‌ನ 2025-26ನೇ ಸಾಲಿಗೆ ಕಾರ್ಯದರ್ಶಿಯಾಗಿ ಆಯ್ಕೆಯಾದ  ಗಣ್ಯ ಉದ್ಯಮಿ  ಹಾಗೂ ಶ್ರೀ ಅನ್ನಪೂರ್ಣೆಶ್ವರಿ ಪ್ರಸಾದ ನಿಲಯದ ಸದಸ್ಯರಾದ ರಾಜಣ್ಣ ಮಲ್ಲಾಡದ ಅವರನ್ನು  ನಗರದ ಶ್ರೀ ಅನ್ನಪೂರ್ಣೆಶ್ವರಿ ಪ್ರಸಾದ ನಿಲಯದ ವತಿಯಿಂದ ಸನ್ಮಾನಿಸಲಾಯಿತು.  

ಈ ಸಂದರ್ಭದಲ್ಲಿ ನಿಲಯದ ಗೌರವಾಧ್ಯಕ್ಷರಾದ ಎಸ್‌.ಎಸ್‌. ಕಳಸಾಪೂರ, ಉಪಾಧ್ಯಕ್ಷರಾದ ಉಮೇಶ ಪೂಜಾರ, ಪದಾಧಿಕಾರಿಗಳಾದ  ಗುರುಮೂರ್ತಿ ಮರೇಗುದ್ದಿ, ವೆಂಕಟೇಶ ಇಮರಾಪೂರ, ಮುತ್ತು ಜಡಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.