ಮುದ್ದೇಬಿಹಾಳ, 28 : ಪಟ್ಟಣದ ಹಳೆ ತಹಶಿಲ್ದಾರ ಕಚೇರಿ ಹತ್ತಿರವಿರುವ ಇತಿಹಾಸವುಳ್ಳ ಶ್ರೀ ಏಳುಮಕ್ಕಳ ತಾಯಿ ದೇವಸ್ಥಾನಕ್ಕೆ ಬೇಟಿ ನೀಡಿದ ಶಾಸಕ ಸಿ ಎಸ್ ನಾಡಗೌಡ(ಅಪ್ಪಾಜಿ)ಯವರ ಸುಪುತ್ರಿ ಹಾಗೂ ರಾಜ್ಯ ಮಹಿಳಾ ಕಾಂಗ್ರೇಸ್ಸಿನ ನೂತನ ಪ್ರದಾನ ಕಾರ್ಯದರ್ಶಿಗಳಾಗಿ ಆಯ್ಕೆಗೊಂಡ ಪಲ್ಲವಿ ನಾಡಗೌಡ ಶೇಟ್ಟಿಯವರನ್ನು ದೇವಸ್ಥಾನ ಜಾತ್ರಾ ಕಮೀಟಿಯ ವತಿಯಿಂದ ಸನ್ಮಾನಿಸಿ ಗೌರವಿಸಿದರು.
ಈ ವೇಳೆ ದಲಿತ ಮುಖಂಡ ಶ್ರೀಕಾಂತ ಚಲವಾದಿ, ನೀಲಮ್ಮ ಚಲವಾದಿ, ಪುರಸಭೆ ಸದಸ್ಯ ಶಿವು ಶಿವಪುರಿ, ತಾಲೂಕಾ ಮಹಿಳಾ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಶೋಭಾ ಶೇಳ್ಳಗಿ, ಮಹಾಂತೇಶ ಚಲವಾದಿ, ಯಲ್ಲಪ್ಪ ಚಲವಾದಿ, ಶಂಕರ ಅಜಮನಿ, ಪಾವಡೇಪ್ಪ ದೊಡಮನಿ, ಜಟ್ಟೇಪ್ಪ ಪೂಜಾರಿ ಸೇರಿದಂತೆ ಹಲವರು ಇದ್ದರು.