ಶಾಸಕರಿಂದ ಕಲಾವಿದ ಶರೀಪಗೆ ಸನ್ಮಾನ

ಶಾಸಕರಿಂದ ಕಲಾವಿದ ಶರೀಪಗೆ ಸನ್ಮಾನ Felicitation for artist Sharif

ಶಿಗ್ಗಾವಿ 07: ರಾಜ್ಯ ಯುವ ಸಿರಿ ಹಾಗೂ ಜಾನಪದ ಸಿರಿ ಪಡೆದ ಶಿಗ್ಗಾವಿ ತಾಲೂಕು ಶ್ಯಾಡಂಬಿ ಗ್ರಾಮದ ಯುವ ಜನಪದ ಕಲಾವಿದ ಶರೀಫ ಮಾಕಪ್ಪನವರ ಅವರನ್ನು ಕರ್ನಾಟಕ ಸರ್ಕಾರದ ಕೊಳಗೇರಿ ಅಭಿವೃದ್ದಿ ಮಂಡಳಿ ಅಧ್ಯಕ್ಷರು ಹಾಗೂ ಹುಬ್ಬಳ್ಳಿ ಧಾರವಾಡ ಪೂರ್ವ ಕ್ಷೇತ್ರದ ಶಾಸಕ ಪ್ರಸಾದ್ ಅಬ್ಬಯ್ಯ ಅವರು ಅವರ ಹುಬ್ಬಳ್ಳಿಯ ಗೃಹ ಕಛೇರಿಯಲ್ಲಿ ಸನ್ಮಾನಿಸಿ ಗೌರವಿಸಿದರು. 

ಈ ಸಂಧರ್ಭದಲ್ಲಿ ಶಿಗ್ಗಾವಿ ತಾಲೂಕು ಚಲವಾದಿ ಮಹಾಸಭಾ ಅಧ್ಯಕ್ಷ ಪ್ರಮೋದ ಚಲವಾದಿ ಉಪಾಧ್ಯಕ್ಷ ಮಹೇಶ ಕಳಸದ ಕಾರ್ಯದರ್ಶಿ ವೀರೇಶ ಕಾಳೆ ಮುಖಂಡರಾದ ಶಂಕರ ಇಂಗಳಗಿ ಪ್ರಭಾಕರ ಹಾಗೂ ಇತರರು ಹಾಜರಿದ್ದರು.