ಹುದ್ದೆಗೆ ಬಡ್ತಿ ಪಡೆದ ತಹಶೀಲ್ದಾರ್ ಎಂ.ವಿ. ಗುಂಡಪ್ಪಗೋಳ ಅವರಿಗೆ ಸನ್ಮಾನ

ಹುದ್ದೆಗೆ ಬಡ್ತಿ ಪಡೆದ ತಹಶೀಲ್ದಾರ್ ಎಂ.ವಿ. ಗುಂಡಪ್ಪಗೋಳ ಅವರಿಗೆ ಸನ್ಮಾನ Felicitation for Tahsildar M.V. Gundappagola on his promotion

  ಯರಗಟ್ಟಿ 16: ವೀರಶೈವ ಲಿಂಗಾಯತ ಸಮಾಜದ ವತಿಯಿಂದ ತಹಶೀಲ್ದಾರ್ ಹಾಗೂ ತಾಲೂಕು ದಂಡಾಧಿಕಾರಿ ಎಂ.ವಿ. ಗುಂಡಪ್ಪಗೋಳ ಅವರನ್ನು ಗ್ರೇಡ್‌-2 ಹುದ್ದೆಯಿಂದ ಗ್ರೇಡ್‌-1 ಹುದ್ದೆಗೆ ಬಡ್ತಿ ಪಡೆದ ಹಿನ್ನೆಲೆಯಲ್ಲಿ ಸನ್ಮಾನಿಸಲಾಯಿತು.  

ಈ ಸಂದರ್ಭದಲ್ಲಿ ಮಾತನಾಡಿದ ಗಣ್ಯರು, ಗುಂಡಪ್ಪಗೋಳ ಅವರ ಸೇವಾ ನಿಷ್ಠೆ ಹಾಗೂ ಕಾರ್ಯಕ್ಷಮತೆಯನ್ನು ಶ್ಲಾಘಿಸಿ, ಮುಂದಿನ ಹುದ್ದೆಯಲ್ಲಿಯೂ ಉತ್ತಮ ಸೇವೆ ಸಲ್ಲಿಸುವಂತೆ ಶುಭ ಹಾರೈಸಿದರು.  

ಸನ್ಮಾನ ಕಾರ್ಯಕ್ರಮದಲ್ಲಿ ವೀರಶೈವ ಲಿಂಗಾಯತ ಸಮಾಜದ ಹಿರಿಯರಾದ ಶಿವಶಂಕರ ಪಟ್ಟೇದ, ಶಿವಾನಂದ ಯರಗಟ್ಟಿ, ಈರಣ್ಣ ಮಠಪತಿ, ವಿರೂಪಾಕ್ಷ ಮದ್ದಾನಿ, ಸಿದ್ದಲಿಂಗಪ್ಪ ಗಲಗಲಿ, ಮಹಾಂತೇಶ ಯರಗಟ್ಟಿ, ಶಿವಾನಂದ ಕರ್ಜಗಿಮಠ, ಎಂ.ಎಂ. ವಿರಕ್ತಮಠ, ರಾಜೇಂದ್ರ ವಾಲಿ, ಬಸವರಾಜ ಮಲ್ಲಶೆಟ್ಟಿ, ಈರಣ್ಣ ಹೂಳೂರ ಸೇರಿದಂತೆ ಹಲವರು ಉಪಸ್ಥಿತರಿದ್ದರು.