ಬಾಕಿ ಬಿಲ್ಲನ್ನು ಸಂದಾಯುಸುವಂತೆ ಕಾರ್ಖಾನೆ ಬೀಗ ಜಡಿದು ರೈತರ ಪ್ರತಿಭಟನೆ

Farmers protest, lock down factory to demand payment of outstanding bills

ಬಾಕಿ ಬಿಲ್ಲನ್ನು ಸಂದಾಯುಸುವಂತೆ ಕಾರ್ಖಾನೆ ಬೀಗ ಜಡಿದು ರೈತರ ಪ್ರತಿಭಟನೆ  

ಹಾವೇರಿ 8: ತಾಲ್ಲೂಕಿನ ಸಂಗೂರ ಜಿಎಂ ಶುಗರ್ಸ್‌ ಕಾರ್ಖಾನೆಗೆ ರೈತರಿಗೆ ಹಣ ಸಂದಾಯ ಮಾಡುವಂತೆ ಒತ್ತಾಯಿಸಿ ಬೀಗ ಜಡಿದು ರೈತರು ಪ್ರತಿಭಟನೆ ಮಾಡಿದರು. 

   2024-25 ಹಂಗಾಮಿನಲ್ಲಿ 2 ಲಕ್ಷ  ಟನ್ ಕಬ್ಬನ್ನು ಕಾರ್ಖಾನೆಯಲ್ಲಿ ಕಬ್ಬು ಅರೆದಿದ್ದುಈ ವರ್ಷದ ಎಪ್‌ಆರ್‌ಪಿ ದರ ರೂ.3151 ಇದ್ದು ಅದರಲ್ಲಿ 3035 ರೂಪಾಯಿ ಹಣವನ್ನು ಹಾಕಿದ್ದಾರೆ ಇನ್ನು ಉಳಿದ 116 ರೂಪಾಯಿ ಹಣವನ್ನು ಕಾರ್ಖಾನೆಗೆ ಕಬ್ಬು ಸಾಗಿಸಿ ಏಳು ತಿಂಗಳು ಆದರೂ ರೈತರಿಗೆ ಹಣ ಸಂದಾಯ ಮಾಡಿಲ್ಲ. ರೈತರು ಪದೇ ಪದೇ ಕಾರ್ಖಾನೆಗೆ ಅಡ್ಡಾಡಿದರು ಸರಿಯಾದ ಮಾಹಿತಿಯನ್ನು ಕೊಡುತ್ತಿಲ್ಲ ಜಿಲ್ಲಾ ಫುಡ್ ಡಿಡಿ ಅವರು  ಆಗಮಿಸಿದರು ಅವರಿಗೂ ಸರಿಯಾದ ಮಾಹಿತಿಯನ್ನು ಕೊಟ್ಟಿರುವುದಿಲ್ಲ ಸರ್ಕಾರಕ್ಕೆ ತಪ್ಪು ಮಾಹಿತಿಯನ್ನು ತೋರಿಸಿದ್ದಾರೆ ರೈತರಿಗೆ ಯಾವುದೇ ತರ ಬಿಲ್ಲನ್ನು ಕೊಡುವುದಿಲ್ಲ ಎಂದು ಹೇಳಿದ್ದಾರೆ ಸರ್ಕಾರಕ್ಕೆ ಸಹಿತ ಅದೇ ರೀತಿ ತಪ್ಪು ಮಾಹಿತಿಯನ್ನು ಕೊಟ್ಟಿದ್ದಾರೆ ಅದು ಎಲ್ಲ ರೈತರಿಗೆ ತಿಳಿದಾಗ ರೈತರು ರೊಚ್ಚಿಗೆದ್ದು ಕಾರ್ಖಾನೆ ಎದುರುಗಡೆ ಪ್ರತಿಭಟನೆ ಮಾಡಿ ಕಾರ್ಖಾನೆ ಇಂದ ಹೊರಹೋಗುವ ಮೂರು ಗೇಟುಗಳನ್ನು ಬಂದ್ ಮಾಡಿದ್ದಾರೆ ಸುಮಾರು 25 ಲಾರಿಗಳು ಸಕ್ಕರೆಯನ್ನು ತುಂಬಿ ನಿಂತಿವೆ ಪ್ರತಿದಿನ ಸಕ್ಕರೆ ಮಾರಿದರು ಕಾರ್ಖಾನೆ ಗುತ್ತಿಗೆದಾರ ರೈತರಿಗೆ ಬರಬೇಕಾದ  (ಎರಡು ಕೋಟಿ ಮೂವತ್ತೆರಡು ಲಕ್ಷ ಅರವತ್ತು ಸಾವಿರ) ರೂಪಾಯಿಗಳನ್ನು2,32,60,000 ಗಳನ್ನು ಬಾಕಿ ಇಟ್ಟುಕೊಂಡಿದ್ದಾರೆ.ನಮ್ಮ ಹಣವನ್ನು ನಮಗೆ ಕೊಡಲು ಕಾರ್ಖಾನೆ ಗುತ್ತಿಗೆದಾರ ಹಿಂದೇಟು ಹಾಕುತ್ತಿದ್ದಾರೆ ನಮ್ಮ ರೈತರಿಗೆ ಹಣವನ್ನು ಪಾವತಿಸುವವರೆಗೂ ನಾವು ಸಕ್ಕರೆಯನ್ನು ಮಾರಲು ಬಿಡುವುದಿಲ್ಲ ವೆಂದು, ಎಲ್ಲ  ಕಬ್ಬು ಬೆಳೆಗಾರರು ರೈತ ಮುಖಂಡರು ಎಚ್ಚರಿಕೆಯನ್ನು ನೀಡಿದ್ದಾರೆ. 

         ಈ ಸಂದರ್ಭದಲ್ಲಿ ರಾಜ್ಯ ಕಬ್ಬು ಬೆಳೆಗಾರ ಸಂಘದ ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪೂರ,ರಾಜಶೇಖರ ಬೆಟಗೇರಿ,ಫಕ್ಕೀರ​‍್ಪ ಕುರುಬರ,ಮಂಜುನಾಥ ಅಸುಂಡಿ,ನಾಗೇಂದ್ರ​‍್ಪ ಕೆಂಗೊಂಡ,ಶಂಕರಗೌಡ ಪಾಟೀಲ,ಬಸವರಾಜ ಕೆಂಗೊಂಡ,ಮಹೇಶ ಪಾಟೀಲ,ವೀರೇಶ ಸೋಮಕ್ಕನವರ,ಶಂಕರಗೌಡ ಪಾಟೀಲ,ಸೋಮಣ್ಣ ಹಾವೇರಿ,ರಾಜು ಹೊನ್ನತ್ತಿ,ಕೊಡೆಪ್ಪ ಸಿಂಗಾಪುರ,ನಾಗರಾಜ ಹೊನ್ನತ್ತಿ ಹಾಗೂ ಅನೇಕ ರೈತ ಮುಖಂಡರುಗಳು ಪಾಲ್ಗೊಂಡಿದ್ದರು.