ನಿವೃತ್ತ ಮುಖ್ಯೋಪಾಧ್ಯಾಯ ಬಸವರಾಜ ಕನಗನಹಳ್ಳಿ ಅವರಿಗೆ ಬೀಳ್ಕೊಡುಗೆ ಸಮಾರಂಭ

ನಿವೃತ್ತ ಮುಖ್ಯೋಪಾಧ್ಯಾಯ ಬಸವರಾಜ ಕನಗನಹಳ್ಳಿ ಅವರಿಗೆ ಬೀಳ್ಕೊಡುಗೆ ಸಮಾರಂಭ  Farewell ceremony for retired headmaster Basavaraja Kanaganahalli

ರಾಣೆಬೆನ್ನೂರು 30: ನಗರದ ಶ್ರೀ ಆದಿಶಕ್ತಿ ದೇವಸ್ಥಾನ ಸಮುದಾಯ ಭವನದಲ್ಲಿ ಕನಕದಾಸ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಬಸವರಾಜ ಕನಗನಹಳ್ಳಿ ಅವರಿಗೆ ಆತ್ಮೀಯ ಬೀಳ್ಕೊಡುಗೆ ಹಾಗೂ ಸನ್ಮಾನ ಸಮಾರಂಭ ನಡೆಯಿತು.  

ಕಾರ್ಯಕ್ರಮದಲ್ಲಿ ಅವರ ಶಿಷ್ಯರು, ಸಹೋದ್ಯೋಗಿಗಳು ಹಾಗೂ ಗಣ್ಯರು ಭಾಗವಹಿಸಿ, ಶಿಕ್ಷಣ ಕ್ಷೇತ್ರಕ್ಕೆ ಅವರು ಸಲ್ಲಿಸಿದ ಸೇವೆಯನ್ನು ಸ್ಮರಿಸಿ ಅಭಿನಂದಿಸಿದರು.  ಕಾರ್ಯಕ್ರಮವು ನಂದಿಗುಡಿ ವೃಷಭಪುರಿ ಮಹಾಸಂಸ್ಥಾನದ ಶ್ರೀ ಸಿದ್ದರಾಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ ನೆರವೇರಿತು.  

ಈ ಸಂದರ್ಭದಲ್ಲಿ ಜಿ.ಕೆ. ಬೀರಣ್ಣ, ಲಕ್ಷ್ಮೀಕಾಂತ ಹಲಗೂರ, ಸಿ.ವಿ. ಅಡಿವೇರ್, ಜಿ.ಜಿ. ಹೊಟ್ಟಿಗೌಡರ, ಎಸ್‌.ಎಚ್‌. ಪಾಟೀಲ, ಸರೋಜಮ್ಮ ಬಾಣದ, ಪಾರ್ವತಮ್ಮ ಕನಗನಹಳ್ಳಿ, ಪ್ರಭಾವತಿ ತಿಳುವಳ್ಳಿ, ಆರ್‌.ಜೆ. ಪಾಟೀಲ, ಸಿ.ಎನ್‌. ಗ್ಯಾನಗೌಡ್ರ, ಜಿ.ಎಂ. ಹನುಮಗೌಡ, ಬಸವರಾಜ ನಾಯಕ, ಜಿ.ಕೆ. ಬಾತಿ, ಮಹೇಶ್ ಬಾಬು ಶೇಪುರ, ಬಸವರಾಜ ಶಾಮನೂರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.