ಪ್ರತಿಯೊಬ್ಬರಿಗೂ ಕಾನೂನು ಅರಿವು ಅಗತ್ಯ :ನ್ಯಾಯಾಧೀಶೆ ಅಕ್ಷತಾ .ಸಿ .ಆರ್
Everyone needs legal knowledge: Justice Akshata C.R.
ಮುಂಡಗೋಡ 14 :ಕಾನೂನು ಅರಿವು ನೆರವು ಕಾರ್ಯಕ್ರಮಗಳು ಸಾರ್ವಜನಿಕರಿಗೆ ಕಾನೂನಿನ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಉಚಿತ ಕಾನೂನು ಸಲಹೆ ನೆರವು ನೀಡಲು ರೂಪಿಸಲಾದ ಸಾರ್ವಜನಿಕರು ತಮ್ಮ ಹಕ್ಕು ಮತ್ತು ಕಾನೂನು ಅರಿವು ಹೊಂದುವುದು ಅತ್ಯಗತ್ಯ ಎಂದು ಗೌರವಾನ್ವಿತ ನ್ಯಾಯಾಧೀಶರಾದ ಅಕ್ಷತಾ ಸಿ ಆರ್ ರವರು ಹೇಳಿದರು. ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಬೆಂಗಳೂರು, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಕಾರವಾರ, ತಾಲೂಕು ಕಾನೂನು ಸೇವಾ ಸಮಿತಿ ಮುಂಡಗೋಡ ಅಭಿಯೋಜನಾ ಇಲಾಖೆ ಮುಂಡಗೋಡ ವಕೀಲರ ಸಂಘ ಮುಂಡಗೋಡ ಹಾಗೂ ಮುಂಡಗೋಡ ತಾಲೂಕಿನ ಇತರೇ ಇಲಾಖೆಗಳ ಸಹಯೊಗದೊಂದಿಗೆ ನಾಲ್ಲಾ ಜಾಗೃತಿ ಯೋಜನೆ-2025 " ತಳಮಟ್ಟದ ಮಾಹಿತಿ ಮತ್ತು ಪಾರದರ್ಶಕತೆಗಾಗಿ ನ್ಯಾಯ ಜಾಗೃತಿ ಯೋಜನೆ ಅಂಗವಾಗಿ ಶುಕ್ರವಾರ ಬೆಳಿಗ್ಗೆ ಪಟ್ಟಣದ ಜೆಎಮ್ ಎಫ್ಸಿ ನ್ಯಾಯಾಲಯದಲ್ಲಿ ಹಮ್ಮಿಕೊಳ್ಳಲಾಗಿತ್ತು. ಮುಂಡಗೋಡ ತಾಲೂಕಿನ 16 ಪಂಚಾಯತ, 8 ಶಾಲೆಗಳು 05 ಅಂಗನವಾಡಿ ಕೇಂದ್ರಗಳನ್ನು ಸೇರಿ ಒಟ್ಟು 30 ಕಡೆಗಳಲ್ಲಿ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಗೌರವಾನ್ವಿತ ನ್ಯಾಯಾಧೀಶರಾದ ಶ್ರೀಮತಿ ಅಕ್ಷತಾ ಸಿ ಆರ್, ತಹಶೀಲ್ದಾರಾದ ಶಂಕರ ಗೌಡಿ, ಸಹಾಯಕ ಸರಕಾರಿ ವಕೀಲರಾದ ಪ್ರಸಾದ ರಮೇಶ ಹೆಗಡೆ,ವಕೀಲರ ಸಂಘದ ಅಧ್ಯಕ್ಷರಾದ ಎನ್ ಎ. ನಿಂಬಾಯಿ, ಉಪಾಧ್ಯಕ್ಷರಾದ ಎಸ್.ಎಮ್. ಮಲವಳ್ಳಿ, ಹಾಗೂ ಸಹ ಕಾರ್ಯದರ್ಶಿಗಳಾದ ಜ್ಯೋತಿ ಪಾಟೀಲ್, ಖಜಾಂಜಿಯಾದ ಕೆ.ಎಸ್. ಗುಲಾನವರ್, ಹಿರಿಯ ವಕೀಲರಾದ ಗುಡ್ಡಪ್ಪ ಕಾತೂರ, ಮಂಜುನಾಥ್ ವೇರ್ಣೇಕರ , ಪೊಲೀಸ್ ನೀರಿಕ್ಷಕರಾದ ರಂಗನಾಥ ನೀಲಮ್ಮನವರ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸುಮಾ ಜಿ,ಹಾಗೂ ಸಿ.ಡಿ.ಪಿ.ಓ. ಇಲಾಖೆಯ ಯೋಜನಾಧಿಕಾರಿಗಳಾದ ನಂದನಕುಮಾರ, ಪಟ್ಟಣ ಪಂಚಾಯತ ಮುಖ್ಯಾಧಿಕಾರಿಗಳಾದ ಸಂತೋಷ ಕುಮಾರ , ಕಾರವಾರ ಜಿಲ್ಲಾ ಮಹಿಳಾ ಸಬಲಿಕರಣದ ಯೋಜನಾಧಿಕಾರಿಗಳಾದ ವನಜಶ್ರೀ ನಾಯಕ, ಹಾಗೂ ಎಲ್ಲಾ ಹಿರಿಯ ಕಿರಿಯ ವಕೀಲರು ಮತ್ತು ನ್ಯಾಯಾಲಯದ ಸಿಬ್ಬಂದಿಗಳು ಹಾಗೂ ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 