ಮನುಕುಲದ ಉಳಿವಿಗೆ ಪರಿಸರ ಸಂರಕ್ಷಣೆ ಅಗತ್ಯ: ಮರಲಿಂಗನ್ನವರ
Environmental protection is essential for the survival of humanity: Maralingan
ಮೂಡಲಗಿ 27: ಮನುಕುಲದ ಉಳಿವಿಗೆ ಪರಿಸರ ಸಂರಕ್ಷಣೆಯ ಅಗತ್ಯವಿದೆ, ಪ್ರತಿಯೊಬ್ಬರು ಅರಣ್ಯ ಸಂರಕ್ಷಿಸುವುದರ ಜೊತೆಗೆ ಮತ್ತಷ್ಟು ಗಿಡಮರಗಳನ್ನ ಬೆಳೆಸಬೇಕು, ಪರಿಸರ ನೈರ್ಮಲ್ಯ ಕಾಪಾಡಿಕೊಳ್ಳಬೇಕು, ಮಿತ ಮತ್ತು ಹೊಗೆ ರಹಿತ ವಾಹನ ಮತ್ತು ಯಂತ್ರಗಳನ್ನು ಬಳಸಬೇಕು ಮತ್ತು ರಸ್ತೆ ನಿಯಮಗಳನ್ನು ತಪ್ಪದೇ ಪಾಲಿಸುವುದಲ್ಲದೆ ವಾಹನ ನಿರ್ವಹಣೆಯ ಪರವಾಣಿಗೆ ಪಡೆದುಕೊಳ್ಳಬೇಕೆಂದು ಸಾರಿಗೆ ಇಲಾಖೆಯ ಗೋಕಾಕ- ಪ್ರಾದೇಶಿಕ ಕಛೇರಿಯ ಹಿರಿಯ ಮೋಟಾರು ವಾಹನ ತನಿಕಾಧಿಕಾರಿ(ಎ.ಆರ್.ಟಿ.ಓ) ಎಸ್ ಆರ್.ಮರಲಿಂಗನ್ನವರ ಹೇಳಿದರು.
ಅವರು ಬುಧವಾರದಂದು ಪಟ್ಟಣದ ಚೈತನ್ಯ ಸೋಷಿಯಲ್ ವೆಲ್ಫೇರ ಸೊಸಾಯಿಟಿ ಚೈತನ್ಯ ಐಟಿಐ ಕೇಂದ್ರದಲ್ಲಿ ಸಾರಿಗೆ ಇಲಾಖೆ ವತಿಯಿಂದ ಕೈಕೊಳ್ಳಲಾದ ವಾಯು ಮಾಲಿನ್ಯ ನಿಯಂತ್ರಣ ಜಾಗೃತಿ ಮಾಸಾಚರಣೆ ಅಂಗವಾಗಿ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಸಾರಿಗೆ ಇಲಾಖಾ ಕಛೇರಿಯ ಮುಜುಮಿಲ್ ಪಿರಜಾದೆ, ಚೈತನ್ಯ ಐಟಿಐ ಕೇಂದ್ರದ ಪ್ರಾಚಾರ್ಯ ಎಸ್.ಬಿ.ಕುಳ್ಳೋಳಿ, ಟಿ. ಆರ್, ಝಾರೆ, ಜೆ.ಎಸ್. ಸಮಾಜೆ, ಆರ್.ವಾಯ್.ನಾಯಿಕ, ಎಸ್.ಎಲ್. ಪೂಜೇರಿ, ದೀಪಾ ಕಲ್ಯಾಣಿ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 