ಮನುಕುಲದ ಉಳಿವಿಗೆ ಪರಿಸರ ಸಂರಕ್ಷಣೆ ಅಗತ್ಯ: ಮರಲಿಂಗನ್ನವರ
Environmental protection is essential for the survival of humanity: Maralingan
ಮೂಡಲಗಿ 27: ಮನುಕುಲದ ಉಳಿವಿಗೆ ಪರಿಸರ ಸಂರಕ್ಷಣೆಯ ಅಗತ್ಯವಿದೆ, ಪ್ರತಿಯೊಬ್ಬರು ಅರಣ್ಯ ಸಂರಕ್ಷಿಸುವುದರ ಜೊತೆಗೆ ಮತ್ತಷ್ಟು ಗಿಡಮರಗಳನ್ನ ಬೆಳೆಸಬೇಕು, ಪರಿಸರ ನೈರ್ಮಲ್ಯ ಕಾಪಾಡಿಕೊಳ್ಳಬೇಕು, ಮಿತ ಮತ್ತು ಹೊಗೆ ರಹಿತ ವಾಹನ ಮತ್ತು ಯಂತ್ರಗಳನ್ನು ಬಳಸಬೇಕು ಮತ್ತು ರಸ್ತೆ ನಿಯಮಗಳನ್ನು ತಪ್ಪದೇ ಪಾಲಿಸುವುದಲ್ಲದೆ ವಾಹನ ನಿರ್ವಹಣೆಯ ಪರವಾಣಿಗೆ ಪಡೆದುಕೊಳ್ಳಬೇಕೆಂದು ಸಾರಿಗೆ ಇಲಾಖೆಯ ಗೋಕಾಕ- ಪ್ರಾದೇಶಿಕ ಕಛೇರಿಯ ಹಿರಿಯ ಮೋಟಾರು ವಾಹನ ತನಿಕಾಧಿಕಾರಿ(ಎ.ಆರ್.ಟಿ.ಓ) ಎಸ್ ಆರ್.ಮರಲಿಂಗನ್ನವರ ಹೇಳಿದರು.
ಅವರು ಬುಧವಾರದಂದು ಪಟ್ಟಣದ ಚೈತನ್ಯ ಸೋಷಿಯಲ್ ವೆಲ್ಫೇರ ಸೊಸಾಯಿಟಿ ಚೈತನ್ಯ ಐಟಿಐ ಕೇಂದ್ರದಲ್ಲಿ ಸಾರಿಗೆ ಇಲಾಖೆ ವತಿಯಿಂದ ಕೈಕೊಳ್ಳಲಾದ ವಾಯು ಮಾಲಿನ್ಯ ನಿಯಂತ್ರಣ ಜಾಗೃತಿ ಮಾಸಾಚರಣೆ ಅಂಗವಾಗಿ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಸಾರಿಗೆ ಇಲಾಖಾ ಕಛೇರಿಯ ಮುಜುಮಿಲ್ ಪಿರಜಾದೆ, ಚೈತನ್ಯ ಐಟಿಐ ಕೇಂದ್ರದ ಪ್ರಾಚಾರ್ಯ ಎಸ್.ಬಿ.ಕುಳ್ಳೋಳಿ, ಟಿ. ಆರ್, ಝಾರೆ, ಜೆ.ಎಸ್. ಸಮಾಜೆ, ಆರ್.ವಾಯ್.ನಾಯಿಕ, ಎಸ್.ಎಲ್. ಪೂಜೇರಿ, ದೀಪಾ ಕಲ್ಯಾಣಿ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.
ಕೋಲ್ಕತ್ತಾ ಟಿಎಂಸಿ ಕಚೇರಿ ವಿವಾದದ ಮೇಲೆ ಬಂಡಾಯ ಗುಂಪಿಗೆ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ, “ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿಕೆ
ಸಿಸಿಬಿ ಪೊಲೀಸರ ದಾಳಿ–4.96 ಲಕ್ಷ ಮೌಲ್ಯದ ಹೆರಾಯಿನ್ ವಶ, ಓರ್ವ ಬಂಧನ
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ 