ಜ್ಞಾನ ಜ್ಯೋತಿ ಶಾಲೆಯಲ್ಲಿ ಪರಿಸರ ದಿನಾಚರಣೆ

ಜ್ಞಾನ ಜ್ಯೋತಿ ಶಾಲೆಯಲ್ಲಿ ಪರಿಸರ ದಿನಾಚರಣೆ Environment Day celebration at Gyan Jyoti School

ಹೂವಿನಹಡಗಲಿ 28: ತಾಲೂಕಿನ ಹೊಳಗುಂದಿ ಗ್ರಾಮದಲ್ಲಿ ಶುಕ್ರವಾರ  ಜ್ಞಾನ ಜ್ಯೋತಿ ಶಾಲೆ ವಿದ್ಯಾರ್ಥಿಗಳಿಗೆ ಸ್ವಾಗತ  ಹಾಗೂ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.

ನಿವೃತ್ತ ಅರಣ್ಯಾಧಿಕಾರಿ ಹಾಗೂ ಸ್ನೇಹ ಸಾಗರ ವಿದ್ಯಾ ಸಂಸ್ಥೆಯ ಅಧ್ಯಕ್ಷ ವೀರ​‍್ಪ ಮುದೇಗೌಡ್ರು ಸಸಿ ನೆಡುವುದರ ಮೂಲಕ ಉದ್ಘಾಟಿಸಿ ಮಾತನಾಡಿ ಮನುಷ್ಯನ ಮೂಲಭೂತ ಸೌಕರ್ಯಗಳಲ್ಲಿ ಶಿಕ್ಷಣ ಅತಿ ಮುಖ್ಯವಾದದ್ದು ಜತೆಗೆ ಪರಿಸರ ಕಾಳಜಿ ಅತಿ ಮುಖ್ಯ ಎಂದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಅಠ ದಡಾರ​‍್ಪ, ನಿವೃತ್ತ ಶಿಕ್ಷಕ ಯು.ವೀರೇಶ್‌.ಹೆಚ್ ಎಂ ಮಲ್ಲಿಕಾರ್ಜುನಯ್ಯ, ಯೋಗ ಶಿಕ್ಷರಾದ ನವೀನ್ ಆಧ್ಯಾತ್ಮಿಕ ಬೋಧನೆ ಮಾಡಿದರು, ಶಾಲೆ ಮುಖ್ಯೋಪಾಧ್ಯಾಯರ ನಿಸಾರ್ ಅಹಮದ್, ಹಾಗೂ ಶಾಲೆಯ ಎಲ್ಲಾ ಸಿಬ್ಬಂದಿ ವರ್ಗದವರು ಹಾಗು ವಿದ್ಯಾರ್ಥಿಗಳು ಹಾಜರಾಗಿದ್ದರು.

ಈ ವೇಳೆ ವಿದ್ಯಾರ್ಥಿಗಳಿಗೆ ಸೂಕ್ತ ಆಕರ್ಷಕ ಬಹುಮಾನ ನೀಡುವುದರ ಮೂಲಕ ಶಾಲೆಗೆ ಸ್ವಾಗತ ಮಾಡಿಕೊಂಡರು, ಎಲ್ಲಾ ತರಗತಿಯ ಮಕ್ಕಳಿಂದ ನೃತ್ಯ ಹಾಗೇನೇ ಭೋಜನ ವ್ಯವಸ್ಥೆಯನ್ನು ಏರಿ​‍್ಡಸಲಾಗಿತ್ತು. ಈ ಕಾರ್ಯಕ್ರಮ ಸಂಘಟನೆಯನ್ನು ಡಾ. ನೆಪೊಲಿಯನ್  ಆಡಳಿತ ಅಧಿಕಾರಿಗಳು  ನಿರ್ವಹಿಸಿದ್ದರು.