ರಾಣೇಬೆನ್ನೂರು12: ಶಿಕ್ಷಕರು ಮಕ್ಕಳ ಶ್ರೇಯೋಭಿವೃದ್ಧಿಯ ಜೊತೆಗೆ ಅವರ ಸರ್ವತೋಮುಖ ವಿಕಾಸಕ್ಕೆ ಭದ್ರ ಬುನಾದಿ ಹಾಕಬೇಕು ಈ ನಿಟ್ಟಿನಲ್ಲಿ ಮೌಲ್ಯಾಧಾರಿತ ಶಿಕ್ಷಣಕ್ಕೆ ಒತ್ತು ನೀಡಬೇಕೆಂದು ನಗರಸಭೆ ಸದಸ್ಯ ಪುಟ್ಟಪ್ಪ ಮರಿಯಮ್ಮನವರಕರೆ ನೀಡಿದರು.
ನಗರದ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ನಂ 6 ರ ಮಕ್ಕಳಿಗೆ ಪುಸ್ತಕ ಪರಿಕರಗಳನ್ನು ವಿತರಿಸಿ ಅವರು ಮಾತನಾಡಿದರು. ಮಕ್ಕಳ ಬೌದ್ಧಿಕ ಮಟ್ಟವನ್ನು ಹೆಚ್ಚಿಸುವಲ್ಲಿ ಶಿಕ್ಷಕರ ಪಾತ್ರ ಹಿರಿದಾದುದು. ಮಕ್ಕಳಲ್ಲಿ ಶಿಸ್ತು, ಸಂಯಮ, ಸಂಸ್ಕಾರಯುತ ಗುಣಗಳನ್ನು ತುಂಬಿದರೆ ಸಮಾಜದಲ್ಲಿಗೌರವಯುತ ಬಾಳಲು ಸಹಕಾರಿಯಾಗುವುದು ಎಂದರು.
ರೈತ ಮುಖಂಡ ಹನುಮಂತಪ್ಪ ಕಬ್ಬಾರ ಮಾತನಾಡಿ, ಸರಕಾರಿ ಶಾಲೆಗಳಿಗೆ ಬಡ ಮಕ್ಕಳು, ಹಿಂದುಳಿದವರು ಇರುತ್ತಾರೆ ಅವರ ಶಿಕ್ಷಣಕ್ಕೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ರಾಣೇಬೆನ್ನೂರು ನಗರ ಸೇರಿದಂತೆ ಗ್ರಾಮೀಣ ಭಾಗದಎಲ್ಲ ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಸು. 10 ಸಾವಿರ ನೋಟ್ ಪುಸ್ತಕ ವಿತರಿಸುತ್ತಿದ್ದೇನೆ ಇದನ್ನು ವಿದ್ಯಾರ್ಥಿಗಳು ಸದ್ಭಳಕೆ ಮಾಡಿಕೊಳ್ಳಬೇಕು.ಸರಕಾರವು ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಅನೇಕ ಸವಲತ್ತುಗಳನ್ನು ನೀಡುತ್ತಿದೆ. ಆದರೂ ಕೂಡಾ ಇಂದಿನ ಆಧುನಿಕ ಶಿಕ್ಷಣ ಪದ್ದತಿಗೆ ಪಾಲಕರು ಖಾಸಗಿ ಶಾಲೆಗಳತ್ತ ಮುಖ ಮಾಡುತ್ತಿದ್ದಾರೆ.
ಸಿರಿವಂತರ ನಡೆಯನ್ನು ಅನುಕರಿಸಿ ಬಡವರೂ ಕೂಡಾ ಸಾಲದ ಹೊರೆಯ ನಡುವೆಯೂ ಖಾಸಗಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸುತ್ತಿರುವುದು ದುರ್ದೈವದ ಸಂಗತಿ.ಸರಕಾರಿ ಶಾಲೆಯಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳೇ ಇಂದು ಐಎಎಸ್, ಕೆಎಎಸ್ ನಂತಹ ಉನ್ನತ ಹುದ್ದೆಗಳನ್ನು ಅಲಂಕರಿಸಿ ಸಮಾಜದಲ್ಲಿ ಗೌರವಯುತ ಜೀವನ ನಡೆಸುತ್ತಿದ್ದಾರೆ ಎಂಬುದನ್ನು ಯಾರೂ ಮರೆಯಬಾರದು.ಆದ್ದರಿಂದ ಶಿಕ್ಷಕರು ಪಾಲಕರನ್ನು ಮನವೊಲಿಸಿ ಸರಕಾರಿ ಶಾಲೆಗೆ ತಮ್ಮ ಮಕ್ಕಳ ಶಿಕ್ಷಣ ಕೊಡಿಸುವಲ್ಲಿ ಪ್ರೇರೇಪಿಸಬೇಕು ಜೊತೆಗೆ ಜನಪ್ರತಿನಿಧಿಗಳೂ ಸಹ ಕೈ ಜೋಡಿಸಬೇಕೆಂದರು.
ಮುಖಂಡ ಮಂಜುನಾಥ ದುಗ್ಗತ್ತಿ, ಚಂದ್ರಣ್ಣ ತಿಳುವಳ್ಳಿ, ವರುಣ ತಿಳುವಳ್ಳಿ, ಯಲ್ಲಪ್ಪಚತ್ರದ, ಶೋಭಾ ಇಚ್ಚಂಗಿ, ಅಸ್ಮಾ ಬೇಗಂ, ಲಲಿತಾ ಲಮಾಣಿ, ಲಕ್ಷ್ಮವ್ವ ಲಮಾಣಿ, ರಾಜಣ್ಣಅಂಗಡಿ, ಮಂಜಣ್ಣ ಬುಡ್ಡಣ್ಣನವರ, ಶಿಕ್ಷಕರಾದ ಎಂ.ಎ.ತಾಸೇವಾಲೆ, ಐ.ಎಸ್.ಕಿಲ್ಲೇದಾರ, ಬಿ.ಬಿ.ಬದಾಮಿ, ಉಮ್ಮೇಸಲ್ಮಾ, ಅಬ್ದುಲ್ಜಬ್ಬಾರ. ಮುಲ್ಲಾ, ಅನ್ವರಬಾಷಾ ಇಂಡೋಳ್ಳಿ, ಜಮೀಲಾಅತ್ತಾರ, ಮೊಹಸಿನಾಬಾನು ಸೇರಿದಂತೆ ಇತರರು ಇದ್ದರು.