ಅರ್ಹ ಫಲಾನುಭವಿಗಳ ಅಕೌಂಟ್ ತಡೆಹಿಡಿಕೆ : ಬಿಡುಗಡೆಗೆ ಮನವಿ
ಶಿಗ್ಗಾವಿ19 ಃ ಇತ್ತೀಚೆಗೆ ತಾಲೂಕಿನಲ್ಲಿ ಬಿದ್ದ ಅರ್ಹ ಮನೆಯ ಫಲಾನುಭವಿಗಳ ಅಕೌಂಟ್ ಅನ್ನು ತಡೆಹಿಡಿದಿದ್ದು ಇದರಿಂದ ನಿಜವಾದ ಫಲಾನುಭವಿಗಳಿಗೆ ಅನ್ಯಾಯವಾಗುತ್ತಿದೆ ಕೂಡಲೇ ತಡೆಹಿಡಿದಿರುವುದನ್ನ ಬಿಡುಗಡೆ ಮಾಡಿ ಮನೆಗಳನ್ನು ಕಟ್ಟಿಕೊಳ್ಳಲು ಅನುಕೂಲ ಮಾಡಿಕೊಡುವಂತೆ ಒತ್ತಾಯಿಸಿ ರಾಜ್ಯ ಜೀತದಾಳು ಮತ್ತು ಕೃಷಿ ಹಾಗೂ ಕಟ್ಟಡ ಕಾಮರ್ಿಕರ ಒಕ್ಕೂಟದ ವತಿಯಿಂದ ತಹಸೀಲ್ದಾರರಿಗೆ ಮನವಿ ಅಪರ್ಿಸಲಾಯಿತು.
ಬಿದ್ದ ಮನೆಗಳಿಗೆ ಬಿ ಕೆಟಗರಿಯಲ್ಲಿ ಮನೆ ಕಟ್ಟಿಕೊಳ್ಳಲು ಆದೇಶ ಪ್ರತಿ ಈಗಾಗೇ ನೀಡಲಾಗಿದೆ ಜೊತೆಗೆ ಅದರ ಒಂದು ಕಂತಿನ ಹಣವನ್ನು ನೀಡಲಾಗಿದೆ, ಮನೆ ಕಟ್ಟಿಕೊಳ್ಳಲು ತಯಾರಾದ ಫಲಾನುಭವಿಗಳು ಮುಂದಿನ ಹಂತದ ಹಣದ ಬರುವಿಕೆಗಾಗಿ ಕಾದು ಸುಸ್ತಾಗಿ ವಿಚಾರಿಸಲಾಗಿ ಅರ್ಹ ಫಲಾನುಭವಿಗಳ ಅಕೌಂಟ್ ತಡೆ ಹಿಡಿದಿರುವುದು ಬೆಳಕಿಗೆ ಬಂದಿದ್ದು, ಬಿ ಕೆಟಗರಿಯ ಫಲಾನುಭವಿಗಳನ್ನ ಸಿ ಎಂದು ನಮೂದಿಸಿ ಬ್ಲಾಕ್ ಲಿಷ್ಟ್ಗೆ ಸೇರಿಸಿರುವುದು ನಿಜವಾದ ನಿರಾಶ್ರಿತ ಸಾರ್ವಜನಿಕರಿಗೆ ಬಹಳ ತೊಂದರೆಯಾಗಿದೆ ಇದು ಒಂದು ಎರಡು ಮನೆಗಳ ಸಮಸ್ಯೆಯಲ್ಲ ತಾಲೂಕಿನಲ್ಲಿ ಇಂತಹ ಸಮಸ್ಯೆಗಳು ಬಹಳ ಇದ್ದು ಕೂಡಲೆ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಅನುಕೂಲ ಮಾಡಿಕೊಡುವಂತೆ ಮನವಿಯಲ್ಲಿ ಒತ್ತಾಯಿಸಲಿದ್ದಾರೆ.
ಈ ಸಂದರ್ಭದಲ್ಲಿ ಜೀವಿಕ ಜಿಲ್ಲಾ ಸಂಚಾಲಕ ಸುರೇಶ ಹರಿಜನ, ಡಿಎಸ್ಎಸ್ ಜಿಲ್ಲಾ ಮುಖಂಡ ಅಶೋಕ ಕಾಳೆ, ಕನರ್ಾಟಕ ಭೀಮಸೇನೆ ಸಮೀತಿ ತಾಲೂಕಾದ್ಯಕ್ಷ ಮಂಜುನಾಥ ಇಂಗಳಗಿ, ಮನೋಜ ಹರಿಜನ, ಮಂಜುನಾಥ ಕಟ್ಟಿಮನಿ, ಮಾರುತೆಪ್ಪ ಹರಿಜನ ಸೇರಿದಂತೆ ಸಾರ್ವಜನಿಕರು ಇದ್ದರು.
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್
ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ 