ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳ ಆಯ್ಕೆ

ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳ ಆಯ್ಕೆ Election of office bearers of Karnataka Rakshana Vedike

ಲೋಕದರ್ಶನ ವರದಿ 

ಬಳ್ಳಾರಿ 10: ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡ್ರು ಇವರ ಮಾರ್ಗದರ್ಶನದ ಮೇರೆಗೆ ಹಾಗೂ ರಾಜ್ಯ ಉಪಾಧ್ಯಕ್ಷರಾದ   ಚಾನಾಳ್ ಶೇಖರ್ ಇವರ ಸೂಚನೆಯ ಮೇರೆಗೆ ಹಾಗೂ ಜಿಲ್ಲಾಧ್ಯಕ್ಷರಾದ ಅಂಗಡಿ ಶಂಕ್ರ​‍್ಪ ಹಾಗೂ ಕ.ರ.ವೇ. ಪದಾಧಿಕಾರಿಗಳ ಸಮ್ಮುಖದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಕುಡತಿನಿ ಹೋಬಳಿ ಘಟಕದ ನೂತನ ಅಧ್ಯಕ್ಷರನ್ನಾಗಿ ಬಿ. ನಾಗಲಿಂಗಪ್ಪ ಆಚಾರಿ, ಉಪಾಧ್ಯಕ್ಷರನ್ನಾಗಿ    ಸಿ.ಬಸಪ್ಪ, ಪ್ರಧಾನ ಕಾರ್ಯದರ್ಶಿಯನ್ನಾಗಿ ಶ್ರೀ ಜಿ.ದಿವಾಕರ್‌ಬಾಬ ಇವರುಗಳನ್ನು ಆಯ್ಕೆ ಮಾಡಲಾಯಿತು.  

ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರು ಮಾತನಾಡಿ ಬಳ್ಳಾರಿ ಜಿಲ್ಲೆಯಲ್ಲಿ ನಮ್ಮ ಕನ್ನಡ ನಾಡು, ನುಡಿ, ಜಲ ಸಂರಕ್ಷಣೆಗೆ ಬದ್ಧರಾಗಿ ದುಡಿಯಬೇಕೆಂದು ತಿಳಿಸಿದರು. 

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರು ಅಧ್ಯಕ್ಷರಾದ ಅಂಗಡಿ ಶಂಕ್ರ​‍್ಪ, ಉಪಾಧ್ಯಕ್ಷರಾದ ಶಬರಿ ರವಿಕುಮಾರ್, ಜಿ.ತಿಪ್ಪಾರೆಡ್ಡಿ, ಶ್ರೀಧರ್‌ಶೆಟ್ಟಿ, ಕಂದಿ ರಾಜಶೇಖರ್, ಸವೋತ್ತಮರೆಡ್ಡಿ, ಕುಡತಿನಿ ಯುವ ಘಟಕದ ಅಧ್ಯಕ್ಷರು ಮಂಜುನಾಯಕ, ಗೌರವಾಧ್ಯಕ್ಷರಾದ ಜಂಗ್ಲಿಸಾಬ್, ಶ್ರೀನಿವಾಸ್, ಕೆ.ಭೀಮೇಶ್, ಬಿ.ಹುಚ್ಚಪ್ಪ, ಬಿ.ಬಾಲಪ್ಪ, ವೀರಭದ್ರ, ಮಲ್ಲಿಕಾರ್ಜುನ ಚಾನಾಳ್, ಮಸ್ಕಿಮಹಾಂತೇಶ್ ಇನ್ನು ಮುಂತಾದವರು ಉಪಸ್ಥಿತರಿದ್ದರು.