ಬೆಳಗಾವಿ 14: ಜೂ. 12ರಂದು ರಾಣಿ ಚನ್ನಮ್ಮಾ ವಿಶ್ವವಿದ್ಯಾಲಯ, ಬೆಳಗಾವಿಯ ಸಮಾಜಶಾಸ್ತ್ರ ವಿಭಾಗದಿಂದ ಶೈಕ್ಷಣಿಕ ಪ್ರವಾಸವನ್ನು ಹಮ್ಮಿಕೊಳ್ಳಲಾಗಿತ್ತು. ಸದರಿ ಶೈಕ್ಷಣಿಕ ಪ್ರವಾಸವನ್ನು ತಟ್ಟಿಗೆರ, ಹಳಿಯಾಳ ತಾಲ್ಲೂಕು ಮತ್ತು ಕಣ್ಣಿಗೇರ, ಯಲ್ಲಾಪುರ ತಾಲ್ಲೂಕು ಈ ಸ್ಥಳಗಳಿಗೆ ಒಂದು ದಿನದ ಶೈಕ್ಷಣಿಕ ಪ್ರವಾಸವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸ್ಥಳಗಳಲ್ಲಿನ ಸಿದ್ಧಿ ಬುಡಕಟ್ಟು ಸಮೂಹಗಳ ಬುಡಕಟ್ಟು ಆಧ್ಯಯನ ಮತ್ತು ಸಾಮಾಜಿಕ ಸ್ತರವಿನ್ಯಾಸ ಮತ್ತು ಸಾಮಾಜಿಕ ಚಾಲನಶೀಲತೆಯನ್ನು ಅಧ್ಯಯನ ಮಾಡಲಾಯಿತು.
ಈ ಪ್ರವಾಸದಲ್ಲಿ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದ. ಡಾ. ರವಿ ಎಸ್. ದಳವಾಯಿ, ಸಹ ಪ್ರಾದ್ಯಾಪಕರು ಹಾಗೂ ಡಾ. ಮಂಜುಳಾ ಜಿ. ಕೆ. ಸಹಾಯಕ ಪ್ರಾಧ್ಯಪಕರು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು, ಸಂಶೋಧನಾರ್ಥಿಗಳು ಭಾಗವಹಿಸಿದ್ದರು.