ಅಂತರರ್ಜಲ ಹೆಚ್ಚಾಗಿ ವಿವಿದ ಜಿಲ್ಲೆಯಲ್ಲಿ ಭೂ ಕಂಪನ
Earthquakes in various districts, mostly underground
ಅಂತರರ್ಜಲ ಹೆಚ್ಚಾಗಿ ವಿವಿದ ಜಿಲ್ಲೆಯಲ್ಲಿ ಭೂ ಕಂಪನ
ಸಿಂದಗಿ; ಮಹಾರಾಷ್ಟ್ರದಿಂದ ರಾಜ್ಯಕ್ಕೆ ಹೆಚ್ಚುವರಿ ನೀರು ಹರಿದು ಬರುತ್ತಿರುವುದರಿಂದ ಅಲ್ಲದೆ ವಾಡಿಕೆಯಂತೆ ಮಳೆ ಹೆಚ್ಚಾಗಿದ್ದರಿಂದ ಅಂತರರ್ಜಲ ಹೆಚ್ಚಾಗಿ ರಾಜ್ಯದ ಬೀದರ, ಕಲಬುರ್ಗಿ, ವಿಜಯಪುರ ಸೇರಿದಂತೆ ಒಟ್ಟು 174 ಕಡೆ ಭೂ ಕಂಪನವಾಗಿದ್ದು ವಿಜಯಪುರ ಜಿಲ್ಲೆಯಲ್ಲಿ 74 ಬಾರಿ ಭೂ ಕಂಪನವಾಗಿದೆ ಇದರಿಂದ ಯಾವುದೇ ಹಾನಿಯಿಲ್ಲ ಸಾರ್ವಜನಿಕರು ಭಯ ಪಡುವ ಹಾಗಿಲ್ಲ ಎಂದು ಕೆಎಸ್ಎನ್ಡಿಎಂಎಸ್ನ ವೈಜ್ಞಾನಿಕ ಅಧಿಕಾರಿ ಜಗದೀಶ ಸ್ಪಷ್ಟಪಡಿಸಿದರು.
ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಹಮ್ಮಿಕೊಂಡಿರುವ ಪತ್ರಿಕಾಗೋಷ್ಠಿಯಲ್ಲಿ ಕೆಎಸ್ಎನ್ಡಿಎಂಎಸ್ನ ವೈಜ್ಞಾನಿಕ ಅಧಿಕಾರಿ ಮಾತನಾಡಿ, ಸಿಂದಗಿ 47, ಬ.ಬಾಗೆವಾಡಿ 22, ಬಬಲೇಶ್ವರ 4, ವಿಜಯಪುರ 7 ಹೀಗೆ 74 ಕಡೆಗಳಲ್ಲಿ ಭೂ ಕಂಪನವಾಗಿದೆ ಇದು ಅಕ್ಟೋಬರ ತಿಂಗಳ ಅಂತ್ಯದವರೆಗೆ ಮಳೆಯಿರುವ ಕಾರಣ ಹೀಗೆ ಕಾಣಿಸಿಕೊಳ್ಳುವುದು ಸಹಜ. ಸಿಂದಗಿ ಬಾಗದಲ್ಲಿ ಸುಣ್ಣದ ಕಲ್ಲುವಿದೆ ಅದು ಪೌಡರವಾಗಿ ನೀರು ಮಿಶ್ರಣವಾಗಿ ನೀರಿನ ಒತ್ತಡ ಜಾಸ್ತಿಯಾಗಿ ಉದ್ಬವವಾದ ಶಬ್ದ ಸಹಿತ ಕಂಪನವಾಗುತ್ತಿದೆ ಇದರಿಂದ ಭೂಕುಸಿತ ಸಂಬವಿಸುವುದಿಲ್ಲ. ಯಾವುದೇ ಕಟ್ಟಡಗಳಿಗೆ ಹಾನಿಯಿಲ್ಲ ಕಂಪನ ಹೆಚ್ಚು ಕಾಣಿಸಿಕೊಳ್ಳುತ್ತಿದ್ದರೆ ಹೊರಗಡೆಯಿದ್ದು ಯಾವುದೊ ಕಾರ್ಯದಲ್ಲಿ ತೊಡಗಿ ಅದಕ್ಕೆ ಯಾರು ಭಯಪಡುವ ಅಗತ್ಯವಿಲ್ಲ. ಎಂದು ಸಲಹೆ ನೀಡಿದರು.
ತಹಸಿಲ್ದಾರ್ ಕರೆಪ್ಪ ಬೆಳ್ಳಿ ಮಾತನಾಡಿ, ಕಳೇದ ಮೇ ತಿಂಗಳಿನಿಂದ ಪ್ರಾರಂಭವಾದ ಮಳೆ ಇನ್ನೂವರೆ ಮುಂದುವರೆದಿದೆ ಅದಕ್ಕೆ ಅಂತರರ್ಜಲ ಹೆಚ್ಚಾಗಿದ್ದು ಆದ್ದರಿಂದ ಭೂಕಂಪನವಾಗುತ್ತಿದೆ ಇದು ಭೂಕಂಪವಲ್ಲ ಸಾರ್ವಜನಿಕರು ಯಾವುದೇ ಆತಂಕ ಪಡಬೇಕಾಗಿಲ್ಲ. ರಾಂಪೂರದಲ್ಲಿ ಭೂಕಂಪನ ಮಾಪನ ಅಳವಡಿಸಲಾಗಿದ್ದು ಕಂಪನವಾಗುತ್ತಿರುವ ಬಗ್ಗೆ ಮಾಹಿತಿ ದೊರಕುತ್ತದೆ ಅದನ್ನು ಹಂತ ಹಂತವಾಗಿ ಮಾಹಿತಿ ನೀಡಲಗುವುದು ಎಂದರು.
ಈ ಸಂದರ್ಭದಲ್ಲಿ ವೈಜ್ಞಾನಿಕ ಸಹಾಯಕ ಅಧಿಕಾರಿಗಳಾದ ಸಂತೋಷಕುಮಾರ, ಅಣುವೀರ್ಪ ಬಿರಾದಾರ ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 