ಉಚಿತ ಬಾಯಿ, ದಂತ ಪಂಕ್ತಿ ಉಚಿತ ಚಿಕಿತ್ಸೆ ಶಿಬಿರಕ್ಕೆ ಐಹೊಳೆ ಚಾಲನೆ
Drive to free mouth, dental row free treatment camp
ರಾಯಬಾಗ 23: ಬಾಯಿ ಮತ್ತು ಹಲ್ಲಿನ ಆರೋಗ್ಯ ಕಾಪಾಡಿಕೊಂಡರೆ, ಮನುಷ್ಯನ ಆರೋಗ್ಯ ಚೆನ್ನಾಗಿರುತ್ತದೆ ಎಂದು ಶಾಸಕ ಡಿ.ಎಮ್.ಐಹೊಳೆಯವರು ಹೇಳಿದರು.
ಬುಧವಾರ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ರಾಷ್ಟ್ರೀಯ ಬಾಯಿ ಆರೋಗ್ಯ ಅಭಿಯಾನ ಅಂಗವಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಬೆಳಗಾವಿಯ ಕೆ.ಎಲ್.ಇ. ವಿಶ್ವನಾಥ ಕತ್ತಿ ಡೆಂಟಲ್ ಕಾಲೇಜಿ ಹಾಗೂ ಮರಾಠಾ ಮಂಡಳ ಕಾಲೇಜಿ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಉಚಿತ ಬಾಯಿ ಮತ್ತು ದಂತ ತಪಾಸಣೆ ಹಾಗೂ ದಂತ ಪಂಕ್ತಿ ಉಚಿತ ಚಿಕಿತ್ಸೆ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ತಾಲೂಕಿನ ಜನರು ಈ ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕೆಂದರು.
ಚಿಕ್ಕೋಡಿ ಅಪರ ಜಿ.ಆ.ಮತ್ತು ಕು. ಕಲ್ಯಾಣಾಧಿಕಾರಿ ಡಾ.ಶರಣಪ್ಪ ಗಡೆದ ಪ್ರಾಸ್ತಾವಿಕ ಮಾತನಾಡಿ, ತಂಬಾಕು ಪದಾರ್ಥ ಸೇವನೆಯಿಂದ ಹಲ್ಲು ಹುಳುಕು ಆಗಿ ಹಲ್ಲು ಕಿಳಬೇಕಾಗುತ್ತದೆ ಜೊತೆಗೆ ಕ್ಯಾನ್ಸರ್ ರೋಗ ಬರುವ ಸಂಭವ ಇರುವುದರಿಂದ ಸಾರ್ವಜನಿಕರು ಹಲ್ಲು ಮತ್ತು ಬಾಯಿಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಉಚಿತ ದಂತ ಪಂಕ್ತಿ ಶಿಬಿರದಲ್ಲಿ 45 ವರ್ಷ ಮೇಲ್ಪಟ್ಟ 50 ಹಿರಿಯರಿಗೆ ದಂತ ಪಂಕ್ತಿ (ಹಲ್ಲಿನ ಸೆಟ್) ಹಾಕಲಾಗುತ್ತಿದೆ, ಮುಂದಿನ ದಿನಗಳಲ್ಲಿ ಇನ್ನುಳಿದವರಿಗೆ ದಂತ ಪಂಕ್ತಿ ಕೂಡ್ರಿಸಲಾಗುವುದು ಎಂದು ತಿಳಿಸಿದರು.
ಜಿ.ಕು.ಕ.ಅಧಿಕಾರಿ ಡಾ.ವಿಶ್ವನಾಥ ಭೋವಿ, ಜಿಲ್ಲಾ ಎನ್.ಒ.ಪಿ.ಎಚ್ ಅಧಿಕಾರಿ ಡಾ.ಚಂದ್ರ ನಾಯಿಕ, ತಾ.ಆ.ಅಧಿಕಾರಿ ಡಾ.ಎಸ್.ಎಮ್.ಪಾಟೀಲ, ಮುಖ್ಯ ವೈದ್ಯಾಧಿಕಾರಿ ಡಾ.ಆರ್.ಎಚ್.ರಂಗಣ್ಣವರ, ಚಿಕ್ಕೋಡಿ ಟಿ.ಎಚ್.ಒ ಡಾ.ಸುಕುಮಾರ ಬಾಗಾಯಿ, ದಂತ ವೈದ್ಯ ಡಾ.ಸಿದ್ದಾರ್ಥ ಮಗದುಮ್ಮ, ಡಾ.ಅಪ್ಪಾಸಾಹೇಬ ಹೆಗಡೆ, ಡಾ.ಶಾಂತಾರಾಮ ಬಾಗೇವಾಡಿ, ಡಾ.ಸದಾಶಿವ ಖನದಾಳೆ, ಡಾ.ಆರತಿ ಚಿನಕೋಟಿ, ಡಾ.ಎಸ್.ಎಮ್.ಕರಗಾಂವೆ, ಡಾ.ಸುರೇಶ ಬೆಳಗಾಂವಕರ, ಡಾ.ಆನಂದ ತೋರೊ, ಡಾ.ವಿಠಲ ಗೊಂಡೆ, ಡಾ.ಆನಂದ ಹೀರೆಮಠ, ಡಾ.ಪ್ರೀತಿ ಕುಸಗಲ, ಡಾ.ವಿವೇಕ ಹೊನ್ನಳ್ಳಿ, ಡಾ.ಡೇವಿಡ್, ಡಾ.ವಿಶ್ವಜೀತ, ಮುಖಂಡರಾದ ಸದಾಶಿವ ಘೋರೆ್ಡ, ಅಣ್ಣಾಸಾಹೇಬ ಖೆಮಲಾಪೂರೆ, ಸದಾನಂದ ಹಳಿಂಗಳಿ ಹಾಗೂ ಕೆ.ಎಲ್.ಇ. ವಿಶ್ವನಾಥ ಕತ್ತಿ ಡೆಂಟಲ್ ಕಾಲೇಜ ಹಾಗೂ ಮರಾಠಾ ಮಂಡಳ ಕಾಲೇಜಿನ ದಂತ ವೈದ್ಯರು, ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತೆಯರು ಇದ್ದರು.
ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಶಂಕರಗೌಡ ಪಾಟೀಲ ಸ್ವಾಗತಿಸಿ, ನಿರೂಪಿಸಿದರು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 