ನಾಟಕಕಾರ ಪರಶುರಾಮ ಬಣಕಾರ: ಬುದ್ಧನಾಡ ಭೂಷಣ ಪ್ರಶಸ್ತಿ ಭಾಜನ

ನಾಟಕಕಾರ ಪರಶುರಾಮ ಬಣಕಾರ: ಬುದ್ಧನಾಡ ಭೂಷಣ ಪ್ರಶಸ್ತಿ ಭಾಜನ  Dramatist Parasurama Banaka: Buddhanada Bhushan Award Bhajan

ರಾಣೆಬೆನ್ನೂರು 30: ತಾಲೂಕಿನ ಯಕ್ಲಾಸಪುರ ಗ್ರಾಮದ ಯುವ ಸಾಹಿತಿ, ನಾಟಕಕಾರ ಜನಪದ ಕಲಾವಿದ ಪರಶುರಾಮ ಬಣಕಾರ ಅವರು, ಮೈಸೂರು ತನು-ಮನ ಸಂಸ್ಥೆಯು ಕ್ಷೇತ್ರ ಸಾಧಕರಿಗೆ ಕೊಡ ಮಾಡುವ ಪ್ರತಿಷ್ಠಿತ "ಬುದ್ಧನಾಡ ಭೂಷಣ " ಪ್ರಶಸ್ತಿಗೆ ಬಾಜನರಾಗಿದ್ದಾರೆ.  

ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ನಡೆದ "ಜಗ ನಡೆಯಲಿ ಬುದ್ಧನ ಕಡೆ " ಸಂಗೀತ ಕಾರ್ಯಕ್ರಮದಲ್ಲಿ, ಶಾಸಕ ಕೆ.ಹರೀಶಗೌಡ ಅವರು ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಿದರು.  

ಈ ಸಂದರ್ಭದಲ್ಲಿ ಅಹಿಂದ್ ರಾಜ್ಯಾಧ್ಯಕ್ಷ ದ್ಯಾವಪ್ಪ ನಾಯಕ, ಕಸಾಪ ಜಿಲ್ಲಾಧ್ಯಕ್ಷ ಮಡ್ಡಿಕೇರೆ ಗೋಪಾಲ, ಸಂಸ್ಥೆ ಅಧ್ಯಕ್ಷ ಟಿ.ಎಸ್‌. ಸುಮ, ನಿರ್ದೇಶಕ ಲಕ್ಷ್ಮಿರಾಮ್ ನಾಡಪನಹಳ್ಳಿ, ಪತ್ರಕರ್ತ ಸೋಮಯ್ಯ ಮಲೆಯೂರು, ಕಲಾವಿದರಾದ ಮತ್ತಿಕುಂಟೆ ಕೃಷ್ಣ, ಶಿವಕುಮಾರ ಜಾದವ ಮತ್ತಿತರರು ಇದ್ದರು.