ಡಾ. ಸಂಗಪ್ಪ ಚಲುವಾದಿಗೆ ಅಧಿಕಾರ ಹಸ್ತಾಂತರ

ಡಾ. ಸಂಗಪ್ಪ ಚಲುವಾದಿಗೆ ಅಧಿಕಾರ ಹಸ್ತಾಂತರ Dr. Sangappa Chaluvadi hands over power

ಧಾರವಾಡ 14: ಕರ್ನಾಟಕ ವಿಶ್ವವಿದ್ಯಾಲಯ ವಿದ್ಯಾರ್ಥಿ ಕಲ್ಯಾಣ ವಿಭಾಗದ  ನೂತನವಾಗಿ ನಿರ್ದೇಶಕರಾಗಿ ನೇಮಕಗೊಂಡ ಡಾ. ಸಂಗಪ್ಪ ಚಲುವಾದಿ ಅವರಿಗೆ ನಿರ್ಗಮಿತ ನಿರ್ದೇಶಕರಾದ ಡಾ. ಎಸ್‌. ಕೆ ಪವಾರ ಅವರು ಅಧಿಕಾರ ಹಸ್ತಾಂತರಿಸಿದರು.  

ಈ ಸಂದರ್ಭದಲ್ಲಿ ಸಿಂಡಿಕೆಟ್ ಸದಸ್ಯರಾದ ಹುಲ್ಲಣ್ಣವರ, ಕವಿವಿ ಶಿಕ್ಷಕ ಸಂಘದ ಅಧ್ಯಕ್ಷ ಪ್ರೋ. ಎ. ಬಿ ವೇದಮೂರ್ತಿ, ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಎಚ್‌. ಸಿ. ಶಿರಾಳಶೆಟ್ಟಿ, ಪ್ರೋ. ಎಸ್‌.ಎಚ್‌. ರಮನೆ, ಡಾ. ಜೆ. ಎಂ. ಚಂದುನ್ನವರ, ತಂಗು ದೊರೈ ಹಾಗೂ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.ಖಿ