ಡಾ.ನಡುವಿನಕೇರಿಗೆ ಸಿದ್ದೇಶ್ವರ ಸ್ವಾಮಿ ಆಧ್ಯಾತ್ಮ ರತ್ನ ಪ್ರಶಸ್ತಿ ಪ್ರದಾನ

ಡಾ.ನಡುವಿನಕೇರಿಗೆ ಸಿದ್ದೇಶ್ವರ ಸ್ವಾಮಿ ಆಧ್ಯಾತ್ಮ ರತ್ನ ಪ್ರಶಸ್ತಿ ಪ್ರದಾನ  Dr. Naduvinakeri presented with Siddeshwara Swamy Adhyatma Ratna Award

ತಾಳಿಕೋಟಿ 17: ಪಟ್ಟಣದ ಶ್ರೀ ಎಚ್‌ಎಸ್ ಪಾಟೀಲ ಮಹಿಳಾ ಮಹಾ ವಿದ್ಯಾಲಯದಲ್ಲಿ ಪ್ರಾಚಾರ್ಯರಾಗಿ ಸೇವೆ ಸಲ್ಲಿಸುತ್ತಿರುವ ಡಾ.ಹಣಮಂತ ಭೀಮಪ್ಪ ನಡುವಿನಕೇರಿ ಇವರು ಕನ್ನಡ ನಾಡು ಭಾಷೆ ಸಾಹಿತ್ಯ ಹಾಗೂ ಸಾಂಸ್ಕೃತಿಗೆ ಸಲ್ಲಿಸಿದ ಅನುಪಮ ಸೇವೆಗಾಗಿ ಸಿರಿಗನ್ನಡ ವೇದಿಕೆ ಜಿಲ್ಲಾ ಘಟಕ ಕಲಬುರಗಿ ವತಿಯಿಂದ "ಲಿಂಗೈಕ್ಯ ಪೂಜ್ಯಶ್ರೀ ಸಿದ್ದೇಶ್ವರ ಸ್ವಾಮಿ ಆಧ್ಯಾತ್ಮ ರತ್ನ" ರಾಜ್ಯಮಟ್ಟದ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. 

ಸಪ್ಟಂಬರ್ 14ರಂದು ಕಲ್ಬುರ್ಗಿಯಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ಸಿರಿಗನ್ನಡ ವೇದಿಕೆ ಮತ್ತು ಸಾಕ್ಷಿ ಪ್ರತಿಷ್ಠಾನ ಕಲಬುರ್ಗಿ ಇವರ ಸಹಯೋಗದಲ್ಲಿ ಹಮ್ಮಿಕೊಂಡ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಡಾ. ಹಣಮಂತ ನಡುವಿನಕೇರಿ ಇವರಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಖ್ಯಾತ ಸಾಹಿತಿಗಳಾದ ರಾಜಶೇಖರ ಮಠಪತಿ, ವಿದ್ವಾಂಸ ಡಾ.ಎಸ್‌.ಎಂ. ಹಿರೇಮಠ ಹಾಗೂ ಸಿರಿಗನ್ನಡ ಕಲಬುರ್ಗಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಗವಿಸಿದ್ದಪ್ಪ ಪಾಟೀಲ ಇದ್ದರು.