ಜನವಾಣಿಯನ್ನು ದೇವವಾಣಿಯಾಗಿ ಮಾಡಿದ ಕೀರ್ತಿ ಶರಣರದು
Dr. F.G.Halakatti Anubhav: Reunion Program
ವಿಜಯಪುರ, 28 : ಶಿ.ಶಿ.ಬಸವನಾಳರು ಆದರ್ಶ ಪ್ರಾಧ್ಯಾಪಕರಾಗಿ, ಸಮರ್ಥ ಸಂಪಾದಕರಾಗಿ, ನಿಸ್ಪೃಹ ಸಮಾಜ ಕಾರ್ಯಕರ್ತರಾಗಿ, ಸತ್ಯಾನ್ವೇಷಣೆಯ ಸಂಶೋಧಕರಾಗಿ, ನಿಷ್ಪಕ್ಷಪಾತ ಪತ್ರಿಕಾಕರ್ತರಾಗಿ, ಕುಟುಂಬವತ್ಸಲರಾಗಿ, ಕರುಣಾಮಯಿ ಆಪದ್ ಭಾಂದವರಾಗಿ, ಕಾಯಕಯೋಗಿಯಾಗಿ ಬದುಕಿದವರು. ಅಷ್ಟೇ ಅಲ್ಲ ಕನ್ನಡದಲ್ಲಿ ಕೈಕೊಂಡ ಅವರ ಕಾರ್ಯ ಸಾಧನೆ ಅಸದೃಶ್ಯವಾಗಿದೆ. ಅನುಕರಣೀಯವು ಆಗಿದೆ. ಜನವಾಣಿಯನ್ನು ದೇವವಾಣಿ ಮಾಡಿದರೆಂದು ಬಸವನಾಳರು ಹೇಳಿದ್ದು ಅರ್ಥಪೂರ್ಣವಾಗಿದೆ ಎಂದು ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಕನ್ನಡ ವಿಭಾಗ ಮುಖ್ಯಸ್ಥ ಡಾ. ಮಹೇಶ ಚಿಂತಾಮಣಿಯವರು ಹೇಳಿದರು.
ಶನಿವಾರ ನಗರದಲ್ಲಿ ನಡೆದ ವಚನಪಿತಾಮಹ ಡಾ. ಫ.ಗು.ಹಳಕಟ್ಟಿ ಅನುಭಾವ ಹಿ ಮರುಭೆಟ್ಟಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬೆಳಗಾವಿ, ಧಾರವಾಡ, ತಮ್ಮ ಕರ್ಮಭೂಮಿ ಮಾಡಿಕೊಂಡು, ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಅವುಗಳ ಸದಸ್ಯರಾಗಿ ವಿವಿಧ ಗ್ರಂಥಗಳನ್ನು ಪ್ರಕಟಿಸಿ ಮತ್ತು ಪತ್ರಿಕಾ ಸಂಪಾದಕರಾಗಿ ಕಾರ್ಯ ಮಾಡಿದ್ದು ಶ್ಲಾಘನೀಯವಾಗಿದೆ. ಅಂತೆಯೇ ಇವರಿಗೆ ಹಲವಾರು ಪ್ರಶಸ್ತಿಗಳು ಸಂದವು.
ಬಿ.ಎಂ.ಪಾಟೀಲರವರು ಪ್ರಾರ್ಥಿಸಿದರು. ಡಾ. ವಿ.ಡಿ.ಐಹೊಳ್ಳಿ ಸ್ವಾಗತಿಸಿ ಅತಿಥಿಗಳನ್ನು ಪರಿಚಯಿಸಿದರು. ಡಾ. ಸುಭಾಸ ಕನ್ನೂರ ಕಾರ್ಯಕ್ರಮ ನಿರೂಪಿಸಿದರು. ಡಾ. ಸಂಗಮೇಶ ಮೇತ್ರಿ ವಂದಿಸಿದರು. ಡಾ. ಎಂ.ಎಸ್.ಮದಭಾವಿ, ಆರ್.ಕೆ.ಕುಲಕರ್ಣಿ, ಪ್ರೊ. ಎಸ್.ಬಿ.ದೊಡಮನಿ, ಎಸ್.ವಾಯ್.ಗದಗ, ಮ.ಗು.ಯಾದವಾಡ, ಜ.ಸ.ಗಲಗಲಿ, ಬಿ.ಆರ್.ಬನಸೋಡೆ, ವಿ.ಎಸ್.ಖಾಡೆ, ವ್ಹಿ.ಎಸ್.ಬಗಲಿ, ಕೆ.ಎಸ್.ಬಿರಾದಾರ, ಎಂ.ಎಸ್.ಝಳಕಿ, ಅರವಿಂದ ಕಂಚ್ಯಾಣಿ, ಡಾ. ಎಂ.ಎಸ್.ಚಾಂದದಕವಟೆ, ಡಾ. ಸೋಮಶೇಖರ ವಾಲಿ, ಎಸ್.ಬಿ.ನಾಡಗೌಡ, ಹತ್ತಿ ಮತ್ತು ಬ್ಯಾಕೋಡ, ಕೊಪ್ಪಾ ಮೇಡಂ ಸುಭಾಸ ಯಾದವಾಡ ಸುಮಾರು 60ಕ್ಕಿಂತ ಹೆಚ್ಚು ಜನ ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 