ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ

ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ Dr. Babasaheb Ambedkar Jayanti

ವಿಜಯಪುರ 15: ಭೀಮ್ ರಾಜ್ಯ ದಲಿತ ಸೇವಾ ಸಮೀತಿ ವತಿಯಿಂದ ಮಹಾನಾಯಕ ಹಾಗೂ ಭಾರತದ ಸಂವಿಧಾನದ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 135ನೇ ಜಯಂತಿಯನ್ನು ವಿಜಯಪುರ ಜಿಲ್ಲಾ ಕಛೇರಿಯಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು. 

ಕಾರ್ಯಕ್ರಮವು ಜಿಲ್ಲಾ ಅಧ್ಯಕ್ಷರಾದ ನಾಗರಾಜ ಕಬಾಡೆ ಹಾಗೂ ಸಂಸ್ಥಾಪಕ ಅಧ್ಯಕ್ಷರಾದ ಅಪ್ಪುರಾಜ್ ನಿಮಾದಾರ ಅವರ ನೇತೃತ್ವದಲ್ಲಿ ಯಶಸ್ವಿಯಾಗಿ ಜರುಗಿತು. 

ಈ ಸಂದರ್ಭದಲ್ಲಿ ಸಮೀತಿಯ ಪದಾಧಿಕಾರಿಗಳಾದ ನೀಲಾಂಬಿಕ ಬಿರಾದಾರ, ಜಗದೇವ ಸೂರ್ಯವಂಶಿ, ವಿಜಯಕುಮಾರ ನಿಮಾದಾರ, ಚಂದ್ರಶೇಖರ ಕಟ್ಟಿಮನಿ, ಪ್ರಿಯಾಂಕಾ ನಿಮಾದಾರ, ಕವಿತಾ ಹೊಸಮನಿ, ಸಂತೋಷ ಕಟ್ಟಿಮನಿ, ಬಸವರಾಜ ಸರ್ಜಾಪುರ, ದತ್ತಾ ಕಬಾಡೆ, ರಾಘವೇಂದ್ರ ಹೊನಕಾಂಬಳೆ ಗಜೇಂದ್ರ ಕಬಾಡೆ ಸೇರಿದಂತೆ ಸರ್ವ ಸದಸ್ಯರು ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.