ಕಾಂಗ್ರೆಸ್ ಕಛೇರಿಯಲ್ಲಿ ಡಾ.ಅಂಬೇಡ್ಕರ್ ಜಯಂತಿ ಆಚರಣೆ

Dr. Ambedkar Jayanti celebrated at Congress office

ಕಾಂಗ್ರೆಸ್ ಕಛೇರಿಯಲ್ಲಿ ಡಾ.ಅಂಬೇಡ್ಕರ್ ಜಯಂತಿ ಆಚರಣೆ

ಯಲಬುರ್ಗಾ 14: ತಮ್ಮ ಬದುಕನ್ನು ಹೋರಾಟದ ಹಾದಿಯ ಮೂಲಕ ಕಟ್ಟಿಕೊಂಡ ಡಾ.ಬಿ.ಆರ್‌. ಅಂಬೇಡ್ಕರ್ ಅವರು ಸರ್ವ ಜನಾಂಗಕ್ಕೂ ಸ್ಫೂರ್ತಿ ಎಂದು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಕರಿಬಸಪ್ಪ ನಿಡಗುಂದಿ ಹೇಳಿದರು. ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್ ರವರ ಜಯಂತಿ ನಿಮಿತ್ತವಾಗಿ ಸೋಮುವಾರ ದಂದು ಅಂಬೇಡ್ಕರ್ ಅವರು ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದ ಅವರು,  ನಂತರ ತಾ.ಪಂ ಮಾಜಿ ಅಧ್ಯಕ್ಷ ವೀರನಗೌಡ ಬಳೂಟಗಿ ಮಾತನಾಡಿದ ಅವರು, ಮಹಾನ್ ಮಾನವತವಾದಿ ಭಾರತರತ್ನ, ಸಂವಿಧಾನ ಶಿಲ್ಪಿ, ಡಾ.ಬಿ.ಆರ್‌.ಅಂಬೇಡ್ಕರ್ ಅವರು ನಮ್ಮ ದೇಶಕ್ಕೆ ಶ್ರೇಷ್ಠ ಸಂವಿಧಾನದ ಜೊತೆಗೆ ನವ ಭಾರತ ನಿರ್ಮಾಣಕ್ಕೆ ಶ್ರಮಿಸಿದ್ದಾರೆ. ಅವರ ತತ್ವಾದರ್ಶ, ಚಿಂತನೆ, ಹೋರಾಟದ ಹಾದಿಯನ್ನು ಇಂದಿನ ಯುವಪೀಳಿಗೆ ಅರಿಯುವಂತಾಗಬೇಕು ಎಂದು ಹೇಳಿದರು.  

ಬ್ಲಾಕ್ ಕಾಂಗ್ರೆಸ್  ಕಾರ್ಯಾಧ್ಯಕ್ಷ  ಡಾ.ಶಿವನಗೌಡ ದಾನರೆಡ್ಡಿ ಮಾತನಾಡಿ, ಡಾ.ಅಂಬೇಡ್ಕರ್ ರವರು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಮಾನತೆ ಸಿಗಬೇಕು ಎಂದು ಹೋರಾಟ ಮಾಡಿದ್ದಾರೆ. ದೀನ ದಲಿತರ, ಶೋಷಿತ ವರ್ಗದವರ ಏಳಿಗೆಗಾಗಿ ಹಗಲಿರುಳು ದುಡಿದಿದ್ದಾರೆ. ಬಾಬಾ ಸಾಹೇಬ್ ಅವರನ್ನು ಈ ದಿನ ಗೌರವದಿಂದ ಸ್ಮರಿಸಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.  

ಪ್ರಮುಖರಾದ ಬ್ಲಾಕ್ ಕಾಂಗ್ರೆಸ್ ಕಾರ್ಯಾಧ್ಯಕ್ಷ, ಆನಂದ ಉಳ್ಳಾಗಡ್ಡಿ, ಪ್ರಧಾನ ಕಾರ್ಯದರ್ಶಿ ಶರಣಪ್ಪ ಗಾಂಜಿ, ಉಪಾಧ್ಯಕ್ಷ ರೇವಣೆಪ್ಪ ಸಂಗಟಿ, ಭೂನ್ಯಾಯ ಮಂಡಳಿಯ ಸದಸ್ಯ ಮಲ್ಲಿಕಾರ್ಜುನ ಜಕ್ಕಲಿ, ಗಣ್ಯರಾದ ಈರ​‍್ಪ ಕುಡಗುಂಟಿ, ಈಶ್ವರ ಅಟಮಾಳಗಿ,ವೀರುಪಾಕ್ಷಪ್ಪ ದೊಡ್ಡಮನಿ, ಶಿವಾನಂದ ಬಣಕಾರ, ಪುಟ್ಟರಾಜ ಪೂಜಾರ, ನಾಗರಾಜ ತಲ್ಲೂರು, ಚಂದ್ರ​‍್ಪ ದೊಡ್ಡಮನಿ, ಎಂ.ಎಚ್‌. ಉಜ್ಜಮನವರ, ಶರಣಗೌಡ ಬಸಾಪೂರು, ಪರಶುರಾಮ ಸಂಗನಾಳ, ಸುರೇಶ ನಡಲುಮನಿ, ಯಮನೂರ​‍್ಪ ಬಳೂಟಗಿ, ಬಸವರಾಜ ಕಲ್ಲೂರು, ರಹೇಮಾನ ನಾಯಕ, ಎಂ.ಎಫ್ ನಾದಫ್  ಸೇರಿ ಪಕ್ಷದ ಕಾರ್ಯಕರ್ತರು  ಇದ್ದರು.