ಮನೆ ಮನೆಗೆ ಗ್ಯಾರಂಟಿ- ರಂಗೋಲಿ

ಮನೆ ಮನೆಗೆ ಗ್ಯಾರಂಟಿ- ರಂಗೋಲಿ Door to door guarantee - Rangoli

ಕಾರವಾರ, ಫೆ.19:- ಯಲ್ಲಾಪುರ ತಾಲೂಕಾ  ಗ್ಯಾರಂಟಿ ಯೋಜನೆಗಳ ಅನುಷ್ಠಾನ  ಸಮಿತಿ ವತಿಯಿಂದ ಗುರುವಾರ, ಮನೆ ಮನೆಗೆ ಗ್ಯಾರಂಟಿ-ಮನೆ ಮನೆಯಲ್ಲಿ ರಂಗೋಲಿ ಕಾರ್ಯಕ್ರಮಕ್ಕೆ ಕಾಳಮ್ಮನಗರ ವಾರ್ಡನಲ್ಲಿರುವ ಪಟ್ಟಣ ಪಂಚಾಯತ್ ಮಾಜಿ ಅಧ್ಯಕ್ಷ, ಗ್ಯಾರಂಟಿ ಸಮಿತಿ ಸದಸ್ಯೆ ನರ್ಮದಾ ರವೀಂದ್ರ ನಾಯ್ಕ್‌ ರವರ ಮನೆ ಮುಂದೆ ರಂಗೋಲಿ ಹಾಕಿ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಈ ಸಂದರ್ಭದಲ್ಲಿ ಯಲ್ಲಾಪುರ ತಾಲೂಕಾ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ದೇವಿದಾಸ (ಉಲ್ಲಾಸ) ನಾಗೇಶ್ ಶಾನಭಾಗ, ಸದಸ್ಯೆ ಮುಷರತ್ ಖಾನ್ ಹಾಗೂ ವಾರ್ಡಿನ ನಿವಾಸಿಗಳು ಹಾಜರಿದ್ದರು.